ಅಡಿಕೆ ಗಿಡಗಳನ್ನು ಉಳಿಸಲು ಹನಿ ನೀರಾವರಿ ವ್ಯವಸ್ಥೆಯಷ್ಟೆ ಸಾಲದು. ನೆಲಕ್ಕೆ ಮಲ್ಚಿಂಗ್ (ಮಚ್ಚಿಗೆ) ಮಾಡಬೇಕು. ಮರಗಳಿಂದ ಉದುರಿದ ಎಲೆ, ಗರಿ ಇತ್ಯಾದಿಗಳನ್ನು ಗಿಡದ ಬುಡದಲ್ಲಿ ಹಾಕಿದರೆ ತೇವಾಂಶ ಉಳಿಯುತ್ತದೆ. ಹಸಿರೆಲೆ ಮುಚ್ಚಿಗೆಯನ್ನು ಹಾಕುವುದರಿಂದ ನೈಸರ್ಗಿಕ ರಕ್ಷಣೆ ಸಿಗುತ್ತದೆ. ಆಗ ಗಿಡಗಳು ಬಾಡದೆ ಸುಡುಬಿಸಿಲನ್ನೂ ತಡೆದುಕೊಳ್ಳುವ ಶಕ್ತಿ ಪಡೆಯುತ್ತವೆ ಎನ್ನುತ್ತಾರೆ ಕೃಷಿ ವಿಜ್ಞಾನಿ ಬಿಸಲೇಹಳ್ಳಿ ನಟರಾಜ್.