<p><strong>ಅಜ್ಜಂಪುರ</strong>: ‘ಜಾನಪದ ಕಲೆ ಉಳಿಸಿ, ಬೆಳೆಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ’ ಎಂದು ಹಣ್ಣೆ ಮಠದ ಅಭಿನವ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಬೆಣಗುಣಸೆ ಗ್ರಾಮದಲ್ಲಿ ಬೇವಿನ ಮರದಮ್ಮನವರ ನೂತನ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಗುರುಸಿದ್ದರಾಮೇಶ್ವರ ಸ್ವಾಮಿ ಉತ್ಸವ ಸಮಾರಂಭದ ಪ್ರಯುಕ್ತ ನಡೆದ ಜಾನಪದ ಕಲೆಗಳಾದ ರಂಗ ಹೆಜ್ಜೆ, ಪಟ್ಟ ಕುಣಿತ, ತತ್ವಪದಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸರ್ಕಾರ, ಜಾನಪದ ಕಲಾವಿದರಿಗೆ ಮಾಸಾಶನ ನೀಡಲು ನಿಗದಿಗೊಳಿಸಿರುವ ವಯೋಮಿತಿಯನ್ನು 55ಕ್ಕೆ ಇಳಿಸಬೇಕು ಮತ್ತು ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಜಿ.ಬಿ.ಸುರೇಶ್ ಒತ್ತಾಯಿಸಿದರು.</p>.<p>ನಿವೃತ್ತ ಶಿಕ್ಷಕ ಮರುಳಸಿದ್ದಪ್ಪ, ‘ಸರ್ಕಾರ, ಶಾಲಾ-ಕಾಲೇಜುಗಳಲ್ಲಿ ಜಾನಪದ ಕಲೆಯನ್ನು ಪಠ್ಯ ವಿಷಯವಾಗಿ ಬೋಧಿಸಲು ಮತ್ತು ಮಕ್ಕಳು ಮತ್ತು ಯುವ ಪೀಳಿಗೆಗೆ ನುರಿತ ಕಲಾವಿದರಿಂದ ಜಾನಪದ ಕಲೆಯನ್ನು ಕಲಿಸಲು ಸಹಕಾರಿಯಾಗುವ ಯೋಜನೆ ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.</p>.<p>ನಂದೀಪುರದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ಮಾಳೇನಹಳ್ಳಿ ಬಸಪ್ಪ, ಜಾನಪದ ಅಕಾಡಮಿ ಸದಸ್ಯೆ ಲಕ್ಷ್ಮೀದೇವಮ್ಮ, ನಿವೃತ್ತ ಪ್ರಾಂಶುಪಾಲ ಸಿದ್ರಾಮಪ್ಪ, ಕಲಾವಿದ ಕಾರೇಹಳ್ಳಿ ಬಸಪ್ಪ, ದೇವರಾಜ್, ರಚನಾ ಮಾತನಾಡಿದರು.</p>.<p>ಕಲಾವಿದ ಮರುಳಸಿದ್ದಪ್ಪ ಅವರಿಗೆ ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ನೀಡಿದ ‘ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ’ಯನ್ನು ಹಣ್ಣೆ ಮಠದ ಶ್ರೀಗಳು ಪ್ರದಾನ ಮಾಡಿದರು.</p>.<p>ಮುಖಂಡ ರಾಮಲಿಂಗಪ್ಪ, ಆನಂದಪ್ಪ, ಪ್ರದೀಪ್, ಮಲ್ಲೇಶಪ್ಪ, ಲೋಕೇಶಪ್ಪ, ಸದಾಶಿವಪ್ಪ, ಸುರೇಶ್ ಮತ್ತಿತರರಿದ್ದರು.</p>.<p>ಆಂಜನೇಯ ದೇವಾಲಯ ಸಮಿತಿ, ಬೇವಿನ ಮರದಮ್ಮ ದೇವಾಲಯ ಸಮಿತಿ, ಗ್ರಾಮಾಭಿವೃದ್ದಿ ಸಂಘ, ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಜ್ಜಂಪುರ</strong>: ‘ಜಾನಪದ ಕಲೆ ಉಳಿಸಿ, ಬೆಳೆಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ’ ಎಂದು ಹಣ್ಣೆ ಮಠದ ಅಭಿನವ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ತಾಲ್ಲೂಕಿನ ಬೆಣಗುಣಸೆ ಗ್ರಾಮದಲ್ಲಿ ಬೇವಿನ ಮರದಮ್ಮನವರ ನೂತನ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಗುರುಸಿದ್ದರಾಮೇಶ್ವರ ಸ್ವಾಮಿ ಉತ್ಸವ ಸಮಾರಂಭದ ಪ್ರಯುಕ್ತ ನಡೆದ ಜಾನಪದ ಕಲೆಗಳಾದ ರಂಗ ಹೆಜ್ಜೆ, ಪಟ್ಟ ಕುಣಿತ, ತತ್ವಪದಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸರ್ಕಾರ, ಜಾನಪದ ಕಲಾವಿದರಿಗೆ ಮಾಸಾಶನ ನೀಡಲು ನಿಗದಿಗೊಳಿಸಿರುವ ವಯೋಮಿತಿಯನ್ನು 55ಕ್ಕೆ ಇಳಿಸಬೇಕು ಮತ್ತು ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಜಿ.ಬಿ.ಸುರೇಶ್ ಒತ್ತಾಯಿಸಿದರು.</p>.<p>ನಿವೃತ್ತ ಶಿಕ್ಷಕ ಮರುಳಸಿದ್ದಪ್ಪ, ‘ಸರ್ಕಾರ, ಶಾಲಾ-ಕಾಲೇಜುಗಳಲ್ಲಿ ಜಾನಪದ ಕಲೆಯನ್ನು ಪಠ್ಯ ವಿಷಯವಾಗಿ ಬೋಧಿಸಲು ಮತ್ತು ಮಕ್ಕಳು ಮತ್ತು ಯುವ ಪೀಳಿಗೆಗೆ ನುರಿತ ಕಲಾವಿದರಿಂದ ಜಾನಪದ ಕಲೆಯನ್ನು ಕಲಿಸಲು ಸಹಕಾರಿಯಾಗುವ ಯೋಜನೆ ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.</p>.<p>ನಂದೀಪುರದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ಮಾಳೇನಹಳ್ಳಿ ಬಸಪ್ಪ, ಜಾನಪದ ಅಕಾಡಮಿ ಸದಸ್ಯೆ ಲಕ್ಷ್ಮೀದೇವಮ್ಮ, ನಿವೃತ್ತ ಪ್ರಾಂಶುಪಾಲ ಸಿದ್ರಾಮಪ್ಪ, ಕಲಾವಿದ ಕಾರೇಹಳ್ಳಿ ಬಸಪ್ಪ, ದೇವರಾಜ್, ರಚನಾ ಮಾತನಾಡಿದರು.</p>.<p>ಕಲಾವಿದ ಮರುಳಸಿದ್ದಪ್ಪ ಅವರಿಗೆ ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ನೀಡಿದ ‘ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ’ಯನ್ನು ಹಣ್ಣೆ ಮಠದ ಶ್ರೀಗಳು ಪ್ರದಾನ ಮಾಡಿದರು.</p>.<p>ಮುಖಂಡ ರಾಮಲಿಂಗಪ್ಪ, ಆನಂದಪ್ಪ, ಪ್ರದೀಪ್, ಮಲ್ಲೇಶಪ್ಪ, ಲೋಕೇಶಪ್ಪ, ಸದಾಶಿವಪ್ಪ, ಸುರೇಶ್ ಮತ್ತಿತರರಿದ್ದರು.</p>.<p>ಆಂಜನೇಯ ದೇವಾಲಯ ಸಮಿತಿ, ಬೇವಿನ ಮರದಮ್ಮ ದೇವಾಲಯ ಸಮಿತಿ, ಗ್ರಾಮಾಭಿವೃದ್ದಿ ಸಂಘ, ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>