ಕೊಟ್ಟಿಗೆಹಾರ: ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 28ಕ್ಕೆ ‘ತೇಜಸ್ವಿ ಸಾಹಿತ್ಯ ಯಾನ’ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತರ ಕನ್ನಡ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ತೇಜಸ್ವಿ ಅವರ ‘ಎಂಗ್ಟನ ಪುಂಗಿ’ ಕಥೆಯ ಬಗ್ಗೆ ಲೇಖಕ ಪ್ರದೀಪ್ ಕೆಂಜಿಗೆ ಮಾತನಾಡುವರು.