<p>ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದ ದಾರಿ ಅಧ್ವಾನವಾಗಿದೆ. ಕಲ್ಲುಮಣ್ಣು, ತಗ್ಗುದಿಬ್ಬಗಳ ಈ ಕೊರಕಲು ಹಾದಿಯಲ್ಲಿ ಓಡಾಟ ಗೋಳಾಟವಾಗಿದೆ.</p>.<p>ನಗರದ ಕೆಂಪನಹಳ್ಳಿಯ ಆಶಾ ಕಿರಣ ಅಂಧಮಕ್ಕಳ ಶಾಲೆ ಪಕ್ಕದಲ್ಲಿ ಕನ್ನಡ ಭವನ ಇದೆ. ಶಾಲೆಯ ಕಾಂಪೌಂಡ್ ಬಳಿಯಿಂದ ಭವನಕ್ಕೆ ಸಂಪರ್ಕ ದಾರಿ ಇದೆ. ಹಾದಿಯ ಎರಡು ಇಕ್ಕೆಲಗಳಲ್ಲಿ ಕಳೆ ಸಸ್ಯಗಳು–ಮುಳ್ಳಿನ ಗಿಡಗಳು, ಪೊದೆಗಳು ಬೆಳೆದಿವೆ.</p>.<p>ದಾರಿಯುದ್ದಕ್ಕೂ ಗುಂಡಿಗಳಾಗಿವೆ. ಭವನದ ಕಾಂಪೌಂಡ್ ಮುಂಭಾಂಗದಲ್ಲಿ ಪೈಪ್ ಅಳವಡಿಕೆಗೆ ಉದ್ದಕ್ಕೂ ಅಗೆಯಲಾಗಿದೆ. ಭವನದ ಹಿಂದೆ, ಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿವೆ.</p>.<p>ಭವನದ ಮುಂದೆ ರಾಮಕೃಷ್ಣ ಶಾರದಾ ಆಶ್ರಮ ಇದೆ. ಆಶ್ರಮದ ಪಕ್ಕಕ್ಕೆ ಶ್ರೀಗುರು ಕಡೇ ಬಾಗಿಲು ಸಿದ್ದಪ್ಪ ಸ್ವಾಮಿ ದೇವಾಲಯ ಇದೆ.<br />ಕನ್ನಡ ಭವನ, ಶಾರದಾ ಆಶ್ರಮ, ಸಿದ್ದಪ್ಪ ಸ್ವಾಮಿ ದೇಗಲಕ್ಕೆ ಓಡಾಡಲು ಈ ಹದಗೆಟ್ಟ ದಾರಿ ಬಿಟ್ಟರೆ ಬೇರೆ ಹಾದಿ ಇಲ್ಲ.</p>.<p>‘ದತ್ತಿ ಉಪನ್ಯಾಸ’, ‘ಪುಸ್ತಕ ಬಿಡುಗಡೆ’ ಮೊದಲಾದ ಕಾರ್ಯಕ್ರಮಗಳು ಕನ್ನಡ ಭವನದ ಸಭಾಂಗಣದಲ್ಲಿ ನಡೆಯುತ್ತವೆ. ರಸ್ತೆ ದುಃಸ್ಥಿತಿ, ನೀರಿನ ಸಮಸ್ಯೆಗಳು ಭವನದಲ್ಲಿ ಕಾರ್ಯಕ್ರಮಗಳ ಆಯೋಜನೆಗೂ ಹಿಂದೇಟು ಹಾಕುವಂತೆ ಮಾಡಿದೆ.</p>.<p>‘ಕನ್ನಡ ಭವನ ದಾರಿಗೆ ಡಾಂಬರೀಕರಣ ಮಾಡಿಸುವುದಾಗಿ ಶಾಸಕರು ಹೇಳಿದ್ದರು. ಈವರೆಗೆ ಡಾಂಬರೀಕರಣ ಆಗಿಲ್ಲ. ಆಶಾಕಿರಣ ಅಂಧ ಮಕ್ಕಳ ಶಾಲೆಯ ಕೆಲಸಗಾರೊಬ್ಬರು ಕನ್ನಡ ಭವನದ ಸ್ವಚ್ಛತೆ, ನಿರ್ವಹಣೆ ಮಾಡುತ್ತಾರೆ. ನಾಲ್ಕು ತಿಂಗಳಿನಿಂದ ಆ ಕೆಲಸಗಾರನಿಗೆ ಪರಿಷತ್ನವರು ಸಂಬಳ ನೀಡಿಲ್ಲ. ರಸ್ತೆಯ ನಿರ್ಮಾಣಕ್ಕೆ, ಕೆಲಸಗಾರಗೆ ಸಂಬಳ ನೀಡಲು ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂಬುದು ಆಶಾಕಿರಣ ಅಂಧ ಮಕ್ಕಳ ಶಾಲೆಯಡಾ. ಜೆ.ಪಿ.ಕೃಷ್ಣೇಗೌಡ ಅವರ ಒತ್ತಾಯ.</p>.<p><strong>‘ರಸ್ತೆ, ನೀರು, ಬೀದಿ ದೀಪಕ್ಕೆ ಮೊರೆ’</strong></p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನಕ್ಕೆ ರಸ್ತೆ, ನೀರು, ಬೀದಿ ದೀಪ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.</p>.<p>‘ಕನ್ನಡ ಭವನಕ್ಕೆ ಡಾಂಬರು ರಸ್ತೆ ನಿರ್ಮಿಸಬೇಕು. ನಲ್ಲಿ ಸಂಪರ್ಕ ಕಲ್ಪಿಸಬೇಕು. ಮಾರ್ಗದಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು ಎಂದು ಕೋರಿಕೆ ಸಲ್ಲಿಸಿದ್ದೇನೆ. ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದ ದಾರಿ ಅಧ್ವಾನವಾಗಿದೆ. ಕಲ್ಲುಮಣ್ಣು, ತಗ್ಗುದಿಬ್ಬಗಳ ಈ ಕೊರಕಲು ಹಾದಿಯಲ್ಲಿ ಓಡಾಟ ಗೋಳಾಟವಾಗಿದೆ.</p>.<p>ನಗರದ ಕೆಂಪನಹಳ್ಳಿಯ ಆಶಾ ಕಿರಣ ಅಂಧಮಕ್ಕಳ ಶಾಲೆ ಪಕ್ಕದಲ್ಲಿ ಕನ್ನಡ ಭವನ ಇದೆ. ಶಾಲೆಯ ಕಾಂಪೌಂಡ್ ಬಳಿಯಿಂದ ಭವನಕ್ಕೆ ಸಂಪರ್ಕ ದಾರಿ ಇದೆ. ಹಾದಿಯ ಎರಡು ಇಕ್ಕೆಲಗಳಲ್ಲಿ ಕಳೆ ಸಸ್ಯಗಳು–ಮುಳ್ಳಿನ ಗಿಡಗಳು, ಪೊದೆಗಳು ಬೆಳೆದಿವೆ.</p>.<p>ದಾರಿಯುದ್ದಕ್ಕೂ ಗುಂಡಿಗಳಾಗಿವೆ. ಭವನದ ಕಾಂಪೌಂಡ್ ಮುಂಭಾಂಗದಲ್ಲಿ ಪೈಪ್ ಅಳವಡಿಕೆಗೆ ಉದ್ದಕ್ಕೂ ಅಗೆಯಲಾಗಿದೆ. ಭವನದ ಹಿಂದೆ, ಪಕ್ಕದಲ್ಲಿ ಗಿಡಗಂಟಿಗಳು ಬೆಳೆದಿವೆ.</p>.<p>ಭವನದ ಮುಂದೆ ರಾಮಕೃಷ್ಣ ಶಾರದಾ ಆಶ್ರಮ ಇದೆ. ಆಶ್ರಮದ ಪಕ್ಕಕ್ಕೆ ಶ್ರೀಗುರು ಕಡೇ ಬಾಗಿಲು ಸಿದ್ದಪ್ಪ ಸ್ವಾಮಿ ದೇವಾಲಯ ಇದೆ.<br />ಕನ್ನಡ ಭವನ, ಶಾರದಾ ಆಶ್ರಮ, ಸಿದ್ದಪ್ಪ ಸ್ವಾಮಿ ದೇಗಲಕ್ಕೆ ಓಡಾಡಲು ಈ ಹದಗೆಟ್ಟ ದಾರಿ ಬಿಟ್ಟರೆ ಬೇರೆ ಹಾದಿ ಇಲ್ಲ.</p>.<p>‘ದತ್ತಿ ಉಪನ್ಯಾಸ’, ‘ಪುಸ್ತಕ ಬಿಡುಗಡೆ’ ಮೊದಲಾದ ಕಾರ್ಯಕ್ರಮಗಳು ಕನ್ನಡ ಭವನದ ಸಭಾಂಗಣದಲ್ಲಿ ನಡೆಯುತ್ತವೆ. ರಸ್ತೆ ದುಃಸ್ಥಿತಿ, ನೀರಿನ ಸಮಸ್ಯೆಗಳು ಭವನದಲ್ಲಿ ಕಾರ್ಯಕ್ರಮಗಳ ಆಯೋಜನೆಗೂ ಹಿಂದೇಟು ಹಾಕುವಂತೆ ಮಾಡಿದೆ.</p>.<p>‘ಕನ್ನಡ ಭವನ ದಾರಿಗೆ ಡಾಂಬರೀಕರಣ ಮಾಡಿಸುವುದಾಗಿ ಶಾಸಕರು ಹೇಳಿದ್ದರು. ಈವರೆಗೆ ಡಾಂಬರೀಕರಣ ಆಗಿಲ್ಲ. ಆಶಾಕಿರಣ ಅಂಧ ಮಕ್ಕಳ ಶಾಲೆಯ ಕೆಲಸಗಾರೊಬ್ಬರು ಕನ್ನಡ ಭವನದ ಸ್ವಚ್ಛತೆ, ನಿರ್ವಹಣೆ ಮಾಡುತ್ತಾರೆ. ನಾಲ್ಕು ತಿಂಗಳಿನಿಂದ ಆ ಕೆಲಸಗಾರನಿಗೆ ಪರಿಷತ್ನವರು ಸಂಬಳ ನೀಡಿಲ್ಲ. ರಸ್ತೆಯ ನಿರ್ಮಾಣಕ್ಕೆ, ಕೆಲಸಗಾರಗೆ ಸಂಬಳ ನೀಡಲು ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂಬುದು ಆಶಾಕಿರಣ ಅಂಧ ಮಕ್ಕಳ ಶಾಲೆಯಡಾ. ಜೆ.ಪಿ.ಕೃಷ್ಣೇಗೌಡ ಅವರ ಒತ್ತಾಯ.</p>.<p><strong>‘ರಸ್ತೆ, ನೀರು, ಬೀದಿ ದೀಪಕ್ಕೆ ಮೊರೆ’</strong></p>.<p>ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನಕ್ಕೆ ರಸ್ತೆ, ನೀರು, ಬೀದಿ ದೀಪ ಒದಗಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.</p>.<p>‘ಕನ್ನಡ ಭವನಕ್ಕೆ ಡಾಂಬರು ರಸ್ತೆ ನಿರ್ಮಿಸಬೇಕು. ನಲ್ಲಿ ಸಂಪರ್ಕ ಕಲ್ಪಿಸಬೇಕು. ಮಾರ್ಗದಲ್ಲಿ ಬೀದಿದೀಪಗಳನ್ನು ಅಳವಡಿಸಬೇಕು ಎಂದು ಕೋರಿಕೆ ಸಲ್ಲಿಸಿದ್ದೇನೆ. ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>