<p><strong>ತರೀಕೆರೆ:</strong> ಆಟೊ ಚಾಲಕರು, ಹೋಟೆಲ್ ಕಾರ್ಮಿಕರು, ಮಾಧ್ಯಮ ಮತ್ತಿತರರಿಂದ ಕನ್ನಡ ಉಳಿದಿದೆ ಎಂದು ಸಾಹಿತಿ ಎಚ್.ಎಸ್.ಸುರೇಶ್ ಅಭಿಪ್ರಾಯಪಟ್ಟರು.</p>.<p>ಅವರು ಪಟ್ಟಣದ ಮಮತಾ ಮಹಿಳಾ ಸಮಾಜ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ ಮಕ್ಕಳು ಸಣ್ಣವರಿರುವಾಗಲೇ ಹಂತದಲ್ಲಿಯೇ ಕನ್ನಡದ ಆಸಕ್ತಿ ಮೂಡಿಸಬೇಕು ಎಂದರು.</p>.<p>ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಟಿ.ಜಿ. ಮಂಜುನಾಥ್ ಮಾತನಾಡಿ ನಿರ್ಗತಿಕರ, ರೋಗಿಗಳ ಸೇವೆಯಲ್ಲಿ ಮಹಿಳಾ ಸಮಾಜ ಕೈಜೋಡಿಸಬೇಕು ಎಂದರು.</p>.<p>ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಉಳಿವು ಎಂಬ ಕಿರು ನಾಟಕವನ್ನು ಸಮಿತಿ ಸದಸ್ಯರಿಂದ ಪ್ರದರ್ಶಿಸಿದರು. ಕವಿತಾ ಉಮೇಶ್ ಸ್ವಾಗತಿದರು. ಕಾರ್ಯದರ್ಶಿ ಲತಾ ಶ್ರೀನಿವಾಸ್ ನಿರೂಪಿಸಿದರು. ಭಾಗ್ಯಾ ರೇವಣ್ಣ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತರೀಕೆರೆ:</strong> ಆಟೊ ಚಾಲಕರು, ಹೋಟೆಲ್ ಕಾರ್ಮಿಕರು, ಮಾಧ್ಯಮ ಮತ್ತಿತರರಿಂದ ಕನ್ನಡ ಉಳಿದಿದೆ ಎಂದು ಸಾಹಿತಿ ಎಚ್.ಎಸ್.ಸುರೇಶ್ ಅಭಿಪ್ರಾಯಪಟ್ಟರು.</p>.<p>ಅವರು ಪಟ್ಟಣದ ಮಮತಾ ಮಹಿಳಾ ಸಮಾಜ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ ಮಕ್ಕಳು ಸಣ್ಣವರಿರುವಾಗಲೇ ಹಂತದಲ್ಲಿಯೇ ಕನ್ನಡದ ಆಸಕ್ತಿ ಮೂಡಿಸಬೇಕು ಎಂದರು.</p>.<p>ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಟಿ.ಜಿ. ಮಂಜುನಾಥ್ ಮಾತನಾಡಿ ನಿರ್ಗತಿಕರ, ರೋಗಿಗಳ ಸೇವೆಯಲ್ಲಿ ಮಹಿಳಾ ಸಮಾಜ ಕೈಜೋಡಿಸಬೇಕು ಎಂದರು.</p>.<p>ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಉಳಿವು ಎಂಬ ಕಿರು ನಾಟಕವನ್ನು ಸಮಿತಿ ಸದಸ್ಯರಿಂದ ಪ್ರದರ್ಶಿಸಿದರು. ಕವಿತಾ ಉಮೇಶ್ ಸ್ವಾಗತಿದರು. ಕಾರ್ಯದರ್ಶಿ ಲತಾ ಶ್ರೀನಿವಾಸ್ ನಿರೂಪಿಸಿದರು. ಭಾಗ್ಯಾ ರೇವಣ್ಣ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>