ಹಳೇ ವಿದ್ಯಾರ್ಥಿ ಸಂಘಕ್ಕೆ ಕರ್ಣಾಟಕ ಬ್ಯಾಂಕ್ನಿಂದ ₹2 ಲಕ್ಷ, ಉದ್ಯಮಿ ಎಂ.ಆರ್. ಸುರೇಶ್ ₹2.5 ಲಕ್ಷ, ಸಾಗರದ ವೈದೈ ಡಾ.ನಳಿನ ಆರ್. ಭಾಗವತ್ ₹1 ಲಕ್ಷ ದೇಣಿಗೆ ನೀಡಿದರು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಗಳಾದ ಅನು ಆರ್, ಸಂಜನಾ ಎಂ.ಆರ್ ಅವರನ್ನು ಮತ್ತು ಹಳೇ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು.
ಸಂಘದ ಗೌರವ ಅಧ್ಯಕ್ಷ ಕೆ.ಎಂ ಶ್ರೀನಿವಾಸ್, ಪ್ರಾಚಾರ್ಯ ಡಾ.ಎಂ ಸ್ವಾಮಿ, ಡಾ.ನಳಿನ ಆರ್ ಭಾಗವತ್ ಇದ್ದರು.