ಚಿಕ್ಕಮಗಳೂರು: ‘ಗೃಹ ಖಾತೆ ವಹಿಸಿದ್ದಾರೆ, ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.
ಎನ್.ಆರ್.ಪುರ ತಾಲ್ಲೂಕಿನ ಕಡಹಿನಬೈಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸವಾಲುಗಳು ಎಲ್ಲ ಇಲಾಖೆಯಲ್ಲೂ ಇವೆ. ಗೃಹ ಇಲಾಖೆ ಸವಾಲುಗಳನ್ನು ನಿಭಾಯಿಸುತ್ತೇನೆ’ ಎಂದರು.
‘ಎನ್.ಆರ್.ಪುರ ತಾಲ್ಲೂಕಿನ ಅತಿವೃಷ್ಟಿಯಿಂದ ವಿವಿಧೆಡೆ ಸೇತುವೆಗಳು ಹಾಳಾಗಿವೆ. ಮನೆಗಳು ಹಾನಿಯಾಗಿವೆ. ಸೇತುವೆ ನಿರ್ಮಾಣ, ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕ್ರಮವಹಿಸುತ್ತೇನೆ’ ಎಂದು ತಿಳಿಸಿದರು.
ಆರ್ಎಸ್ಎಸ್ನಲ್ಲಿ ಬೆಳೆದಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಶಿಸ್ತು ಕಲಿಸಿದೆ. ಒಳ್ಳೆಯದು, ಕೆಟ್ಟದ್ದು ಯಾವುದು ಎಂದು ಗುರುತಿಸುವುದನ್ನು ಕಲಿಸಿದೆ ಎಂದು ಉತ್ತರಿಸಿದರು.