ಬೆಟ್ಟಗೆರೆ ಗ್ರಾಮದ ಸುರೇಶ್ ಎಂಬವರ ಮನೆ ಕುಸಿದಿದ್ದು, ತ್ರಿಪುಗ ಗ್ರಾಮದ ರಾಧಮ್ಮ ಅವರ ಮನೆಯ ಚಾವಣಿಗೆ ಹಾನಿಯಾಗಿದೆ. ಹಂತೂರು, ದೇವರುಂದ, ಜಿ.ಅಗ್ರಹಾರ, ಹೊಸಳ್ಳಿ, ಮುಗ್ರಹಳ್ಳಿ, ಗುಣಿಬೈಲ್ ಭಾಗಗಳಲ್ಲಿ ಹೇಮಾವತಿ ನದಿ ಪಾತ್ರದಲ್ಲಿ ಹಾಕಿದ್ದ ಭತ್ತದ ಗದ್ದೆಯ ಸಸಿಮಡಿಗಳು ಕೊಚ್ಚಿ ಹೋಗಿವೆ. ಹ್ಯಾರಗುಡ್ಡೆ, ಬಕ್ಕಿ, ದೋಣಿಗೋಡು ಗ್ರಾಮಗಳಲ್ಲಿ ಕಾಫಿ, ಅಡಿಕೆ ತೋಟಗಳಲ್ಲಿ ನೀರು ನಿಂತಿದ್ದು, ಕಾಫಿ, ಕಾಳುಮೆಣಸು, ಅಡಿಕೆ ಬೆಳೆಗಳಿಗೆ ಹಾನಿಯಾಗಿದೆ.