ಚಿಕ್ಕಮಗಳೂರು: ತಾಲ್ಲೂಕಿನ ಕಬ್ಬಿಣಸೇತುವೆ ಬಳಿ ಮಂಗಳವಾರ ಕೆಎಸ್ಆರ್ಟಿಸಿ ಬಸ್, ಟಾಟ್ ಏಸ್ ಲಗೇಜ್ ವಾಹನ, ಕಾರು ಡಿಕ್ಕಿ ಹೊಡೆದು ಕಾರು ಚಾಲಕ ಮೃತಪಟ್ಟಿದ್ದಾರೆ.
ತೀವ್ರ ಗಾಯಗೊಂಡಿದ್ದ ಕಾರು ಚಾಲಕ ಮದನ್ (45) ಅವರನ್ನು ಶಿವಮೊಗ್ಗಕ್ಕೆ ಆಸ್ಪತ್ರೆಗೆ ಒಯ್ಯುವಾಗ ಮೃತಪಟ್ಟಿದ್ದಾರೆ. ಮದನ್ ಅವರು ಮಲ್ಲಂದೂರು ಬಳಿಯ ಹಳ್ಳಿಯವರು, ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯಲ್ಲಿ ವಾಸ ಇದ್ದರು.
‘ಕಬ್ಬಿಣಸೇತುವೆ ಬಳಿಯ ಪೆಟ್ರೋಲ್ ಬಂಕ್ ಸನಿಹದ ತಿರುವಿನಲ್ಲಿ ಸಂಜೆ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಕಡೆಗೆ ಸಾಗುತ್ತಿದ್ದ ಬಸ್ ಮತ್ತು ಮೂಡಿಗೆರೆ ಕಡೆಗೆ ಸಂಚರಿಸುತ್ತಿದ್ದ ಲಗೇಜ್ ವಾಹನ, ಕಾರು ಡಿಕ್ಕಿಯಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.