ಚಿಕ್ಕಮಗಳೂರು: ಜಿಲ್ಲೆಯ ಕೋರ್ಟ್ಗಳಲ್ಲಿ ಶನಿವಾರ ನಡೆದ ಮೆಗಾ ಲೋಕ ಅದಾಲತ್ನಲ್ಲಿ ಒಟ್ಟು 6504 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ಜಿಲ್ಲೆಯ 22 ಪೀಠಗಳಲ್ಲಿ ಲೋಕ ಅದಾಲತ್ ನಡೆಯಿತು. ಮೂರು ದಾಂಪತ್ಯ ಪ್ರಕರಣಗಳಲ್ಲಿ ಬೇರೆಯಾಗಿದ್ದ ದಂಪತಿ ಒಂದಾಗಿದ್ದಾರೆ.
ಕೋರ್ಟ್ಗಳಲ್ಲಿ ಬಾಕಿ ಇದ್ದ 19067 ಪ್ರಕರಣಗಳ ಪೈಕಿ 3733 ಇತ್ಯರ್ಥವಾಗಿವೆ. ಹಾಗೆಯೇ 10491 ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ 2771 ಪ್ರಕರಣಗಳನ್ನು ಇತ್ಯರ್ಥವಾಗಿವೆ.
ಒಟ್ಟು ಇತ್ಯರ್ಥ ಪ್ರಕರಣಗಳ ಮೊತ್ತ 12.34 ಕೋಟಿ. ಪಕ್ಷಗಾರರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಅದಾಲತ್ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ ತಿಳಿಸಿದ್ದಾರೆ.