‘ಸಮಾಜದ ದಾರ್ಶನಿಕರಾದ ಬಸವಣ್ಣ, ಬುದ್ಧ, ಅಂಬೇಡ್ಕರ್ ಆದಿಯಾಗಿ ಪ್ರತಿಯೊಬ್ಬರೂ ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಎಂದು ಕನಸು ಕಂಡಿದ್ದರು. ಆದರೆ, ಇಂದಿಗೂ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿರುವುದು ದುರ್ದೈವವಾಗಿದೆ. ಮಾಚಿದೇವನ ವಿಚಾರಧಾರೆಗಳು, ಮಹಾತ್ಮರ ಚಿಂತನೆಗಳು ಒಂದು ಜಾತಿಗೆ ಮಾತ್ರ ಸೀಮಿತವಾಗಬಾರದು. ಮಹಾತ್ಮರ ಸಂದೇಶಗಳನ್ನು ಎಲ್ಲಾ ವರ್ಗಗಳು, ಎಲ್ಲಾ ಧರ್ಮಗಳು ಸ್ವೀಕರಿಸಬೇಕು’ ಎಂದರು.