<p><strong>ಕಡೂರು</strong>: ಬಿಸಿಲು ಹೆಚ್ಚಾಗುತ್ತಿದ್ದಂತೆ ಹಣ್ಣುಗಳ ಬೆಲೆಯೂ ಹೆಚ್ಚುತ್ತಿದೆ. ಕಡೂರು ಪಟ್ಟಣದಲ್ಲಿ ಬೀಜರಹಿತ ದ್ರಾಕ್ಷಿ ಮಾರಾಟ ಹೆಚ್ಚಿದ್ದು, ಉಳಿದ ಹಣ್ಣುಗಳ ಬೆಲೆ ಗ್ರಾಹಕರಿಗೆ ತುಸು ದುಬಾರಿಯಾಗಿದೆ.</p>.<p>ಬಿಸಿಲು ಕಾಲದಲ್ಲಿ ಆರಂಭವಾಗುವ ಸೀಡ್ಲೆಸ್ ದ್ರಾಕ್ಷಿಯನ್ನು ಪಟ್ಟಣದ ಬಹಳಷ್ಟು ಕಡೆ ಮಾರಾಟ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಸಾಂಗ್ಲಿ ಮುಂತಾದೆಡೆಯಿಂದ ದ್ರಾಕ್ಷಿ ಬರುತ್ತವೆ. ಒಂದು ಕೆ.ಜಿ. ಸೀಡ್ಲೆಸ್ ದ್ರಾಕ್ಷಿ ₹100ಕ್ಕೆ ಮಾರಾಟವಾಗುತ್ತಿದೆ.</p>.<p>ಸ್ಥಳೀಯವಾಗಿ ಕಡಿಮೆ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಬಿ.ಎಚ್.ರಸ್ತೆಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರ ನಡೆಯುತ್ತದೆ. ಕೆ.ಜಿ.ಗೆ ₹80-90ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ದ್ರಾಕ್ಷಿ ಹುಳಿ ಮಿಶ್ರಿತ ವಿಶಿಷ್ಟ ರುಚಿ ಹೊಂದಿದೆ. ಆದರೆ, ಗ್ರಾಹಕರು ಹೆಚ್ಚಾಗಿ ಸಿಹಿ ದ್ರಾಕ್ಷಿಯನ್ನೇ ಖರೀದಿಸುತ್ತಾರೆ. ಹಿಂದೆ ಹೆಚ್ಚು ದೊರೆಯುತ್ತಿದ್ದ ಬೀಜ ಸಹಿತ ದ್ರಾಕ್ಷಿ ಅಪರೂಪವಾಗಿದೆ.</p>.<p>ಇತರ ಹಣ್ಣುಗಳ ಬೆಲೆ ಕಳೆದ ವಾರಕ್ಕಿಂತ ತುಸು ಹೆಚ್ಚಿದೆ. ಸೇಬು ಒಂದು ಕೆಜಿಗೆ ₹120-140, ಮೋಸಂಬಿ ₹60, ಕಿತ್ತಳೆ ₹60-70, ಕರಬೂಜ ₹30-50, ದಾಳಿಂಬೆ ₹150-180, ಸೀತಾಫಲ ₹ 150, ಏಲಕ್ಕಿ ಬಾಳೆ ₹60, ಪಚ್ಚಬಾಳೆ ₹ 35, ಸೀಬೆ ಹಣ್ಣು ₹ 60-65, ಚಿಕ್ಕು ₹100, ಪಪ್ಪಾಯಿ ₹30, ಬೆಣ್ಣೆಹಣ್ಣು ಒಂದಕ್ಕೆ ₹60 ಬೆಲೆಯಿದೆ.</p>.<div><div class="bigfact-title">‘ವ್ಯಾಪಾರ ತೃಪ್ತಿಕರ’</div><div class="bigfact-description">ಬೇಸಿಗೆಯಲ್ಲಿ ಹಣ್ಣಿನ ಬೆಲೆ ಹೆಚ್ಚಾಗುವುದು ಸಾಮಾನ್ಯ. ಪಪ್ಪಾಯ ಬಿಟ್ಟರೆ ಸ್ಥಳೀಯವಾಗಿ ಯಾವುದೇ ಹಣ್ಣು ಬೆಳೆಯುವುದಿಲ್ಲವಾದ್ದರಿಂದ ಹೊರಗಡೆಯಿಂದಲೇ ತಂದು ಮಾರಾಟ ಮಾಡುತ್ತೇವೆ. ಹೀಗಾಗಿ ಹೆಚ್ಚು ಲಾಭವಿಲ್ಲದಿದ್ದರೂ ತೃಪ್ತಿಕರ ವ್ಯಾಪಾರ ನಡೆಯುತ್ತಿದೆ ಎನ್ನುತ್ತಾರೆ ಕಡೂರಿನ ಹಣ್ಣಿನ ವ್ಯಾಪಾರಿ ಹಸನ್ ಮೂಸಾ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು</strong>: ಬಿಸಿಲು ಹೆಚ್ಚಾಗುತ್ತಿದ್ದಂತೆ ಹಣ್ಣುಗಳ ಬೆಲೆಯೂ ಹೆಚ್ಚುತ್ತಿದೆ. ಕಡೂರು ಪಟ್ಟಣದಲ್ಲಿ ಬೀಜರಹಿತ ದ್ರಾಕ್ಷಿ ಮಾರಾಟ ಹೆಚ್ಚಿದ್ದು, ಉಳಿದ ಹಣ್ಣುಗಳ ಬೆಲೆ ಗ್ರಾಹಕರಿಗೆ ತುಸು ದುಬಾರಿಯಾಗಿದೆ.</p>.<p>ಬಿಸಿಲು ಕಾಲದಲ್ಲಿ ಆರಂಭವಾಗುವ ಸೀಡ್ಲೆಸ್ ದ್ರಾಕ್ಷಿಯನ್ನು ಪಟ್ಟಣದ ಬಹಳಷ್ಟು ಕಡೆ ಮಾರಾಟ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಸಾಂಗ್ಲಿ ಮುಂತಾದೆಡೆಯಿಂದ ದ್ರಾಕ್ಷಿ ಬರುತ್ತವೆ. ಒಂದು ಕೆ.ಜಿ. ಸೀಡ್ಲೆಸ್ ದ್ರಾಕ್ಷಿ ₹100ಕ್ಕೆ ಮಾರಾಟವಾಗುತ್ತಿದೆ.</p>.<p>ಸ್ಥಳೀಯವಾಗಿ ಕಡಿಮೆ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದು, ಬಿ.ಎಚ್.ರಸ್ತೆಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ವ್ಯಾಪಾರ ನಡೆಯುತ್ತದೆ. ಕೆ.ಜಿ.ಗೆ ₹80-90ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ದ್ರಾಕ್ಷಿ ಹುಳಿ ಮಿಶ್ರಿತ ವಿಶಿಷ್ಟ ರುಚಿ ಹೊಂದಿದೆ. ಆದರೆ, ಗ್ರಾಹಕರು ಹೆಚ್ಚಾಗಿ ಸಿಹಿ ದ್ರಾಕ್ಷಿಯನ್ನೇ ಖರೀದಿಸುತ್ತಾರೆ. ಹಿಂದೆ ಹೆಚ್ಚು ದೊರೆಯುತ್ತಿದ್ದ ಬೀಜ ಸಹಿತ ದ್ರಾಕ್ಷಿ ಅಪರೂಪವಾಗಿದೆ.</p>.<p>ಇತರ ಹಣ್ಣುಗಳ ಬೆಲೆ ಕಳೆದ ವಾರಕ್ಕಿಂತ ತುಸು ಹೆಚ್ಚಿದೆ. ಸೇಬು ಒಂದು ಕೆಜಿಗೆ ₹120-140, ಮೋಸಂಬಿ ₹60, ಕಿತ್ತಳೆ ₹60-70, ಕರಬೂಜ ₹30-50, ದಾಳಿಂಬೆ ₹150-180, ಸೀತಾಫಲ ₹ 150, ಏಲಕ್ಕಿ ಬಾಳೆ ₹60, ಪಚ್ಚಬಾಳೆ ₹ 35, ಸೀಬೆ ಹಣ್ಣು ₹ 60-65, ಚಿಕ್ಕು ₹100, ಪಪ್ಪಾಯಿ ₹30, ಬೆಣ್ಣೆಹಣ್ಣು ಒಂದಕ್ಕೆ ₹60 ಬೆಲೆಯಿದೆ.</p>.<div><div class="bigfact-title">‘ವ್ಯಾಪಾರ ತೃಪ್ತಿಕರ’</div><div class="bigfact-description">ಬೇಸಿಗೆಯಲ್ಲಿ ಹಣ್ಣಿನ ಬೆಲೆ ಹೆಚ್ಚಾಗುವುದು ಸಾಮಾನ್ಯ. ಪಪ್ಪಾಯ ಬಿಟ್ಟರೆ ಸ್ಥಳೀಯವಾಗಿ ಯಾವುದೇ ಹಣ್ಣು ಬೆಳೆಯುವುದಿಲ್ಲವಾದ್ದರಿಂದ ಹೊರಗಡೆಯಿಂದಲೇ ತಂದು ಮಾರಾಟ ಮಾಡುತ್ತೇವೆ. ಹೀಗಾಗಿ ಹೆಚ್ಚು ಲಾಭವಿಲ್ಲದಿದ್ದರೂ ತೃಪ್ತಿಕರ ವ್ಯಾಪಾರ ನಡೆಯುತ್ತಿದೆ ಎನ್ನುತ್ತಾರೆ ಕಡೂರಿನ ಹಣ್ಣಿನ ವ್ಯಾಪಾರಿ ಹಸನ್ ಮೂಸಾ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>