ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ವಿದ್ಯುತ್ ಆಘಾತದಲ್ಲಿ ರೈತ ಸಾವು

Last Updated 2 ಫೆಬ್ರುವರಿ 2021, 1:10 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನ ಗುಡ್ಡದಹಳ್ಳಿ ಗ್ರಾಮದ ರೈತ ಶ್ರೀನಿವಾಸ್ (27) ವಿದ್ಯುತ್ ಆಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.

ಹೊಲದಿಂದ ಟ್ರ್ಯಾಕ್ಟರ್‌ನಲ್ಲಿ ರಾಗಿಹುಲ್ಲು ತರಲಾಗುತ್ತಿತ್ತು. ಹುಲ್ಲು ಬೀಳದಂತೆ ತಡೆಯಲು ತಂತಿ ಬಿಗಿಯಲಾಗುತ್ತಿತ್ತು. ಆ ತಂತಿ, ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿತು. ಟ್ರ್ಯಾಕ್ಟರ್‌ನ ಟೈರ್‌ಗಳಿಗೆ ಬೆಂಕಿ ತಗುಲಿತು. ಟ್ರ್ಯಾಕ್ಟರ್ ಹೊತ್ತಿ ಉರಿಯುವುದನ್ನು ತಡೆಯಲು ಹೋದ ವೇಳೆ ಶ್ರೀನಿವಾಸ್‌ಗೆ ವಿದ್ಯುತ್ ಶಾಖ್ ತಗುಲಿ ಮೃತಪಟ್ಟರು ಎಂದು ಗ್ರಾಮದ ಮಂಜುನಾಥ್ ತಿಳಿಸಿದರು.

ಈ ಬಗ್ಗೆ ಪ್ರಕರಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತರಿಗೆ ತಾಯಿ, ಸಹೋದರ, ಆರು ಸಹೋದರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT