ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಅಫ್ಗನ್ನಲ್ಲಿನ ದೌರ್ಜನ್ಯ, ಮಹಿಳಾ ವಿರೋಧಿ ನೀತಿಯು ಮನುಕುಲಕ್ಕೆ ಅಪಮಾನಕರ ಸಂಗತಿ. ಅದಕ್ಕೆ ‘ಷರಿಯತ್’ನಿಂದ ಪ್ರಚೋದನೆ ಸಿಕ್ಕಿದ್ದರೆ, ‘ಷರಿಯತ್’ಅನ್ನೇ ಬದಲಾಯಿಸಲು ಮುಸ್ಲಿಂ ವಿದ್ವಾಂಸರು ಆಲೋಚಿಸಬೇಕು. ಇದು ಅಫ್ಗನ್ ಆಂತರಿಕ ವಿಷಯ ಎಂದು ಪರಿಭಾವಿಸಬಾರದು. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು’ ಎಂದರು.