ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರನಾಥ ಯಾತ್ರೆಗೆ ತೆರಳಿದ್ದ ಮೂಡಿಗೆರೆಯ ಯುವಕ ಸಾವು

Published 1 ಆಗಸ್ಟ್ 2023, 12:54 IST
Last Updated 1 ಆಗಸ್ಟ್ 2023, 12:54 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಜನ್ನಾಪುರ ಗ್ರಾಮದ ಗಿರೀಶ್ (25) ತಮ್ಮ ಸ್ನೇಹಿತರೊಂದಿಗೆ ಕೇದಾರನಾಥ ಯಾತ್ರೆಗೆ ಹೋಗಿದ್ದು, ಸೋಮವಾರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

‘ಗಿರೀಶ್‌ ಅವರ ಮೃತದೇಹವನ್ನು ಋಷಿಕೇಷ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲಿಂದ ಜನ್ನಾಪುರಕ್ಕೆ ಮೃತದೇಹವನ್ನು ತರಲು ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತದ ನೆರವು ಕೋರಿದ್ದು, ಬುಧವಾರ ಸಂಜೆ ಹೊತ್ತಿಗೆ ಮೃತದೇಹ ಊರಿಗೆ ತಲುಪುವ ಸಾಧ್ಯತೆ ಇದೆ’ ಎಂದು ಗಿರೀಶ್ ಅವರ ಸಂಬಂಧಿ ಅಡುಗೆ ಕಂಟ್ರಾಕ್ಟರ್ ಶಿಲ್ಪಿ ಎಂಬುವರು ಹೇಳಿದ್ದಾರೆ.

ಜನ್ನಾಪುರದ ಚಂದ್ರು ಎಂಬುವರ ಪುತ್ರರಾದ ಗಿರೀಶ್ ಅಡುಗೆ ವೃತ್ತಿ ಮಾಡುತ್ತಿದ್ದರು. ಮೃತ ಗಿರೀಶ್ ತಂದೆ, ತಾಯಿ, ಸಹೋದರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಗಿರೀಶ್ ಅವರನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT