‘ಗಿರೀಶ್ ಅವರ ಮೃತದೇಹವನ್ನು ಋಷಿಕೇಷ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲಿಂದ ಜನ್ನಾಪುರಕ್ಕೆ ಮೃತದೇಹವನ್ನು ತರಲು ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಜಿಲ್ಲಾಡಳಿತದ ನೆರವು ಕೋರಿದ್ದು, ಬುಧವಾರ ಸಂಜೆ ಹೊತ್ತಿಗೆ ಮೃತದೇಹ ಊರಿಗೆ ತಲುಪುವ ಸಾಧ್ಯತೆ ಇದೆ’ ಎಂದು ಗಿರೀಶ್ ಅವರ ಸಂಬಂಧಿ ಅಡುಗೆ ಕಂಟ್ರಾಕ್ಟರ್ ಶಿಲ್ಪಿ ಎಂಬುವರು ಹೇಳಿದ್ದಾರೆ.