ಕಡೂರು: ‘ನಾನವನಲ್ಲ ಅವಳು’ ಚಿತ್ರದಲ್ಲಿ ಅಮೋಘವಾಗಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರವೇ ಸಂಚಾರಿ ವಿಜಯ್ ಕಡೂರಿನವರು ಎಂಬ ವಿಚಾರ ಬಹುತೇಕ ಮಂದಿಗೆ ತಿಳಿದಿದ್ದು. ಉನ್ನತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕನ್ನಡ ಚಿತ್ರರಂಗಕ್ಕೊಬ್ಬ ಭರವಸೆಯ ನಟ ದೊರಕಿದ ಎಂದು ಕನ್ನಡಿಗರು ಸಂಭ್ರಮಿಸುತ್ತಿದ್ದಾಗಲೇ ವಿಧಿಯಾಟಕ್ಕೆ ಸಂಚಾರಿ ವಿಜಯ್ ತಲೆಬಾಗಿದರು. ಅಪಘಾತದಲ್ಲಿ ಗಾಯಗೊಂಡ ಅವರು 2021ರ ಜೂನ್ 15ರಂದು ವಿಧಿವಶರಾದರು.