‘ಕೋವಿಡ್ ಮೂರನೇ ಅಲೆ ಎದುರಾಗುವ ಸಂಭವ ಇದೆ. ಹೀಗಾಗಿ, ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ ಪ್ರಕ್ರಿಯೆ ಚುರುಕುಗೊಳಿಸಬೇಕು. ಕಳೆದ ಬಾರಿ ಆಮ್ಲಜನಕ ಸಮಸ್ಯೆಯಾಗಿತ್ತು, ಅಂಥ ಸಮಸ್ಯೆಗಳು ಮರುಕಳಿಸದಂತೆ ನಿರ್ವಹಿಸಲು ಈಗಲೇ ಸನ್ನದ್ಧರಾಗುವುದು ಒಳ್ಳೆಯದು’ ಎಂಬುದು ಸ್ಪಂದನ ಕ್ಲಿನಿಕ್ ವೈದ್ಯ ಡಾ.ಸಂತೋಷ್ ನೇತಾ ಸಲಹೆ.
‘ಉತ್ಪಾದನಾ ಘಟಕ ಸಜ್ಜುಗೊಳಿಸಿದ ನಂತರ ಕಾರ್ಯಾಚರಣೆಗೆ 15 ದಿನ ಹಿಡಿಯುತ್ತದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದು ಬೇಡ, ತ್ವರಿತವಾಗಿ ಕಾಮಗಾರಿ ಮುಗಿಸಬೇಕು’ ಎಂದು ಅವರು ಹೇಳಿದರು.