ಮಲೆನಾಡಿಗೆ ಕರಾವಳಿ ಜೊತೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದು. ಆದರೆ ಈ ರಸ್ತೆ ಅಭಿವೃದ್ಧಿ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವುದು ಆಶ್ಚರ್ಯ ಮೂಡಿಸುತ್ತದೆ
ತೇಜಸ್ ನೆಲ್ಲಿಬೀಡು
ಆಂಬುಲೆನ್ಸ್ ಪ್ರಯಾಣ ಸವಾಲು
ಕಳಸ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳು ಮೂಡುಬಿದರೆ ಕಾರ್ಕಳ ನಿಟ್ಟೆ ಮಂಗಳೂರು ಉಜಿರೆ ಉಡುಪಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಕೂಡ ಈ ಊರುಗಳಿಗೆ ಆಗಾಗ್ಗೆ ಹೋಗಬೇಕಾಗುತ್ತದೆ. ಆದರೆ ಹೆದ್ದಾರಿ ದುರವಸ್ಥೆ ಅವರನ್ನು ಕಂಗೆಡಿಸಿದೆ. ಕಳಸ ತಾಲ್ಲೂಕಿನ ರೋಗಿಗಳು ಕಾರ್ಕಳ ಮಂಗಳೂರು ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ರೋಗಿಗಳಿಗೆ ಈ ಹೆದ್ದಾರಿಯ ಪಯಣ ಅತ್ಯಂತ ವೇದನೆ ಕೊಡುತ್ತಿದೆ. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ನಲ್ಲಿ ರೋಗಿಗಳನ್ನುಆಸ್ಪತ್ರೆಗೆ ಕರೆದೊಯ್ಯುವುದು ಸವಾಲು ಆಗಿದೆ ಎಂದು ಹಿರೇಬೈಲಿನ ನಾಗರಿಕ ಸೇವಾ ಸಮಿತಿ ಆಂಬುಲೆನ್ಸ್ ಚಾಲಕ ಶರೀಫ್ ಹೇಳುತ್ತಾರೆ.
‘ಪ್ರಯತ್ನ ನಡೆದಿದೆ’
ಈ ರಸ್ತೆಯ ಸಮಗ್ರ ಅಭಿವೃದ್ಧಿಗೆ ₹40 ಕೋಟಿಯಷ್ಟು ದೊಡ್ಡ ಮೊತ್ತ ಬೇಕಿದೆ. ಹಿಂದೆ ಇಲ್ಲಿ ಸಂಸದೆಯಾಗಿದ್ದವರು ಈ ಬಗ್ಗೆ ಗಮನ ಹರಿಸಲಿಲ್ಲ. ರಾಜ್ಯ ಸರ್ಕಾರ ಮತ್ತು ಕೇಂದ್ರದಿಂದಲೂ ಅನುದಾನ ಸಿಕ್ಕರೆ ರಸ್ತೆ ಅಭಿವೃದ್ಧಿ ಸುಲಭವಾಗಲಿದೆ. ಈ ಬಗ್ಗೆ ಪ್ರಯತ್ನ ನಡೆದಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.