ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಹೂವಿನಗುಂಡಿಯ ಕೀರ್ತಿರಾಜ್, ‘ಹಲವು ದಶಕಗಳಿಂದ ತೀರ್ಥಕೆರೆ, ಹೂವಿನಗುಂಡಿ, ಭದ್ರಾ ಎಸ್ಟೇಟ್, ಗುಂಡಪ್ಪ ಮೈದಾನದ ಸುಮಾರು 204 ಕಾರ್ಡುದಾರರಿಗೆ ಗುಡ್ಡೇತೋಟದಲ್ಲೇ ಪಡಿತರ ವಿತರಿಸಲಾಗುತ್ತಿತ್ತು. ಆದರೆ, ಇದೀಗ ನೆಟ್ವರ್ಕ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ. ಲ್ಯಾಂಪ್ ಸೊಸೈಟಿ ನ್ಯಾಯಬೆಲೆ ಅಂಗಡಿಯ ಮೇಲ್ವಿಚಾರಣೆ ನಡೆಸುತ್ತಿದ್ದು, ಅದರ ಕೈಯಲ್ಲಿ ನಿರ್ವಹಣೆ ಸಾಧ್ಯವಾಗದಿದ್ದಲ್ಲಿ ಬಿಟ್ಟುಕೊಡಲಿ. ಸ್ವಸಹಾಯ ಸಂಘಗಳು ಎಲ್ಲವನ್ನೂ ನಡೆಸಲು ಶಕ್ತವಾಗಿವೆ’ ಎಂದರು.