ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸಾಪ್‌ನಲ್ಲಿ ಆಡಿಯೊ ವೈರಲ್‌: ಪಿಯು ಉಪನ್ಯಾಸಕ ಅಮಾನತು

ವಾಟ್ಸಾಪ್‌ನಲ್ಲಿ ಆಡಿಯೊ ಕ್ಲಿಪ್ಪಿಂಗ್‌ ವೈರಲ್‌
Last Updated 30 ಏಪ್ರಿಲ್ 2020, 13:38 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೊವಿಡ್‌–19 ದೇಣಿಗೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪ್ರಸ್ತಾಪವಿರುವ ಆಡಿಯೋವನ್ನು ವ್ಯಾಟ್ಸಾಪ್‌ ಗ್ರೂಪ್‌ಗೆ ಹರಿಯಬಿಟ್ಟಿದ್ದಾರೆಂದು ನಗರದ ಬೇಲೂರು ರಸ್ತೆ ಸರ್ಕಾರಿ ಪಿಯು ಕಾಲೇಜಿನ ಜೀವವಿಜ್ಞಾನ ಉಪನ್ಯಾಸಕ ಬಿ.ಎಸ್‌.ಮಂಜುನಾಥ್‌ ಅವರನ್ನು ಅಮಾನತು ಮಾಡಲಾಗಿದೆ.

ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಎಂ.ಕನಗವಲ್ಲಿ ಆಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ‘ಹಲೋ ಸಿ.ಎಂ ಸಾಹೇಬ್ರೇ ಫ್ರೀ ಇದೀರದ ಕೊರೊನಾ ಪರಿಹಾರಕ್ಕೆ ಜನರ ಹತ್ರ ದುಡ್ಡು ಕೇಳ್ತಿದೀರಿ ದುಡ್ಡು ಎಲ್ಲಿದೆ ಅಂತ ಲಿಸ್ಟ್‌ ಇಲ್ಲಿದೆ ನೋಡಿ...’ ಆಡಿಯೋ ಕ್ಲಿಪ್ಪಿಂಗ್‌ ಅನ್ನು ಚಿಕ್ಕಮಗಳೂರು ಪದವಿಪೂರ್ವ ಉಪನ್ಯಾಸಕರ ಬಳಗ ವ್ಯಾಟ್ಸಾಪ್‌ ಗುಂಪಿಗೆ ಹರಿಯಬಿಟ್ಟಿದ್ದಾರೆ. ನಾಗರಿಕ ಸೇವಾ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದುರಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT