<p>ಕಳಸ: ಪಟ್ಟಣದಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದೆ.</p>.<p>ಮಧ್ಯಾಹ್ನ 3ರಿಂದ ಆರಂಭವಾದ ಮಳೆ 4 ಗಂಟೆಯವರೆಗೂ ಸತತವಾಗಿ ಸುರಿದು ಒಂದು ಇಂಚಿಗೂ ಹೆಚ್ಚು ಪ್ರಮಾಣ ದಾಖಲಿಸಿದೆ. ಈ ಮಳೆಯು ಮಳೆಗಾಲದ ಎಲ್ಲ ಲಕ್ಷಣಗಳೊಂದಿಗೆ ಶೀತದ ವಾತಾವರಣ ಮೂಡಿಸಿದೆ.</p>.<p>ಕಾಡಿನಲ್ಲಿ, ಕಾಫಿ ತೋಟದಲ್ಲಿ ಬೀರಲಕ್ಕಿ ಹುಳದ ಸತತ ಚೀರಾಟ ಮಳೆಕಾಡಿನ ವಿಶಿಷ್ಟತೆ ಹೆಚ್ಚಿಸಿದೆ. ಭತ್ತದ ಕೃಷಿಗೆ ಪೂರಕವಾದ ಈ ಮಳೆಯಲ್ಲಿ ಭೂಮಿ ಹದ ಮಾಡಿ ಅಗಡಿ ಸಿದ್ಧಪಡಿಸುವ ಕೆಲಸ ಆರಂಭಗೊಳ್ಳುತ್ತಿದೆ. ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಏರಿದ್ದು ನಿಧಾನಕ್ಕೆ ಮೈದುಂಬುತ್ತಿದೆ.</p>.<p class="Briefhead">ಕೊಪ್ಪ: ಉತ್ತಮ ಮಳೆ</p>.<p>ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.</p>.<p>ತಾಲ್ಲೂಕಿನಲ್ಲಿ ವಿವಿಧೆಡೆ ಶುಕ್ರವಾರ ರಾತ್ರಿ ಮಳೆ ಸುರಿದಿತ್ತು. ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಆಗಾಗ ಬಿಡುವ ನೀಡಿ ಮತ್ತೆ ಸುರಿಯಿತು. ಮಧ್ಯಾಹ್ನದ ನಂತರ ಹಲವೆಡೆ ಬಿರುಸು ಮಳೆಯಾಗಿದ್ದು, ಸಂಜೆ ಹೊತ್ತಿಗೆ ಕೊಂಚ ಬಿಡುವು ನೀಡಿತ್ತು.</p>.<p class="Briefhead">ರಸ್ತೆಗೆ ಬಿದ್ದ ಮರ</p>.<p class="Subhead">ಮೆಣಸಿನಹಾಡ್ಯ (ಬಾಳೆಹೊನ್ನೂರು): ಶುಕ್ರವಾರ ರಾತ್ರಿ ಬಾಳೆಹೊನ್ನೂರು, ಜಯಪುರ ಸುತ್ತಮುತ್ತ ಉತ್ತಮ ಮಳೆಯಾಗಿದೆ.</p>.<p>ಕೊಪ್ಪ ತಾಲ್ಲೂಕಿನ ಕಲ್ಲುಗುಡ್ಡೆ ಗ್ರಾಮದ ಸಾತ್ ಕೊಡಿಗೆ ನೆಲ್ಲಿಹಡ್ಲು ಮಧ್ಯ ಭಾಗದಲ್ಲಿ ರಸ್ತೆಗೆ ಮರಬಿದ್ದು, ಹೊರನಾಡು– ಕೊಗ್ರೆ ರಸ್ತೆ ಸಂಪರ್ಕ ಬೆಳಿಗ್ಗೆ ಕಡಿತಗೊಂಡಿತ್ತು. ಮರ ಬಿದ್ದ ಜಾಗದಿಂದ ಕೆಲವೇ ಅಡಿಗಳ ದೂರದಲ್ಲಿ ಸಣ್ಣಮ್ಮ ರಾಮೇಗೌಡರ ಮನೆಯಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳಸ: ಪಟ್ಟಣದಲ್ಲಿ ಶನಿವಾರ ಧಾರಾಕಾರ ಮಳೆ ಸುರಿದಿದೆ.</p>.<p>ಮಧ್ಯಾಹ್ನ 3ರಿಂದ ಆರಂಭವಾದ ಮಳೆ 4 ಗಂಟೆಯವರೆಗೂ ಸತತವಾಗಿ ಸುರಿದು ಒಂದು ಇಂಚಿಗೂ ಹೆಚ್ಚು ಪ್ರಮಾಣ ದಾಖಲಿಸಿದೆ. ಈ ಮಳೆಯು ಮಳೆಗಾಲದ ಎಲ್ಲ ಲಕ್ಷಣಗಳೊಂದಿಗೆ ಶೀತದ ವಾತಾವರಣ ಮೂಡಿಸಿದೆ.</p>.<p>ಕಾಡಿನಲ್ಲಿ, ಕಾಫಿ ತೋಟದಲ್ಲಿ ಬೀರಲಕ್ಕಿ ಹುಳದ ಸತತ ಚೀರಾಟ ಮಳೆಕಾಡಿನ ವಿಶಿಷ್ಟತೆ ಹೆಚ್ಚಿಸಿದೆ. ಭತ್ತದ ಕೃಷಿಗೆ ಪೂರಕವಾದ ಈ ಮಳೆಯಲ್ಲಿ ಭೂಮಿ ಹದ ಮಾಡಿ ಅಗಡಿ ಸಿದ್ಧಪಡಿಸುವ ಕೆಲಸ ಆರಂಭಗೊಳ್ಳುತ್ತಿದೆ. ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಏರಿದ್ದು ನಿಧಾನಕ್ಕೆ ಮೈದುಂಬುತ್ತಿದೆ.</p>.<p class="Briefhead">ಕೊಪ್ಪ: ಉತ್ತಮ ಮಳೆ</p>.<p>ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದೆ.</p>.<p>ತಾಲ್ಲೂಕಿನಲ್ಲಿ ವಿವಿಧೆಡೆ ಶುಕ್ರವಾರ ರಾತ್ರಿ ಮಳೆ ಸುರಿದಿತ್ತು. ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಆಗಾಗ ಬಿಡುವ ನೀಡಿ ಮತ್ತೆ ಸುರಿಯಿತು. ಮಧ್ಯಾಹ್ನದ ನಂತರ ಹಲವೆಡೆ ಬಿರುಸು ಮಳೆಯಾಗಿದ್ದು, ಸಂಜೆ ಹೊತ್ತಿಗೆ ಕೊಂಚ ಬಿಡುವು ನೀಡಿತ್ತು.</p>.<p class="Briefhead">ರಸ್ತೆಗೆ ಬಿದ್ದ ಮರ</p>.<p class="Subhead">ಮೆಣಸಿನಹಾಡ್ಯ (ಬಾಳೆಹೊನ್ನೂರು): ಶುಕ್ರವಾರ ರಾತ್ರಿ ಬಾಳೆಹೊನ್ನೂರು, ಜಯಪುರ ಸುತ್ತಮುತ್ತ ಉತ್ತಮ ಮಳೆಯಾಗಿದೆ.</p>.<p>ಕೊಪ್ಪ ತಾಲ್ಲೂಕಿನ ಕಲ್ಲುಗುಡ್ಡೆ ಗ್ರಾಮದ ಸಾತ್ ಕೊಡಿಗೆ ನೆಲ್ಲಿಹಡ್ಲು ಮಧ್ಯ ಭಾಗದಲ್ಲಿ ರಸ್ತೆಗೆ ಮರಬಿದ್ದು, ಹೊರನಾಡು– ಕೊಗ್ರೆ ರಸ್ತೆ ಸಂಪರ್ಕ ಬೆಳಿಗ್ಗೆ ಕಡಿತಗೊಂಡಿತ್ತು. ಮರ ಬಿದ್ದ ಜಾಗದಿಂದ ಕೆಲವೇ ಅಡಿಗಳ ದೂರದಲ್ಲಿ ಸಣ್ಣಮ್ಮ ರಾಮೇಗೌಡರ ಮನೆಯಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>