ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿ ಮುಂದುವರಿದಿದೆ.ಬಾಳೆಹೊನ್ನೂರು ಬಳಿಯಹೆಗ್ಗದ್ದೆ ಸಮೀಪ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿದೆ. ಕೊಪ್ಪ ತಾಲ್ಲೂಕಿನ ಬಿಜೆಕಟ್ಟೆ ಬಳಿ ತೋಟ, ಗದ್ದೆಗಳು ಜಲಾವೃತವಾಗಿವೆ.
ಕೊಪ್ಪ ತಾಲ್ಲೂಕಿನ ನಾರ್ವೆ ಬಳಿ ತುಂಗಾ ನದಿ ನೀರು ರಸ್ತೆಗೆ ಹೊರಳಿದ್ದು ಕೊಪ್ಪ- ಜಯಪುರ ಮಾರ್ಗದಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಆರ್ಡಿಕೊಪ್ಪ ಭಾಗದಲ್ಲಿ ಗದ್ದೆ, ತೋಟಗಳಿಗೆ ನೀರು ನುಗ್ಗಿದೆ.
ಶೃಂಗೇರಿಯಲ್ಲಿ ಕುರುಬಗೇರಿ, ಭಾರತೀ ತೀರ್ಥ ರಸ್ತೆಗಳು ಜಲಾವೃತವಾಗಿವೆ. ಶೃಂಗೇರಿ- ಮಂಗಳೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.ಚಿಕ್ಕಮಗಳೂರು ತಾಲ್ಲೂಕಿನ ಅರೇನೂರು ಗ್ರಾಮದ ತೋಟಗಳಲ್ಲಿ ನೀರು ನುಗ್ಗಿದೆ. ಮಲೆನಾಡು ಭಾಗದ ಹಲವೆಡೆ ವಿದ್ಯುತ್ ಪೂರೈಕೆ ಕಡಿತವಾಗಿದೆ.
ಕೊಪ್ಪ ತಾಲ್ಲೂಕಿನ ಬಿಜೆಕಟ್ಟೆ ಬಳಿ ತೋಟ, ಗದ್ದೆಗಳು ಜಲಾವೃತವಾಗಿವೆ.