ನಸುಕಿಂದಲೂ ಸುರಿಯಲು ಪ್ರಾರಂಭಿಸಿದ ಮಳೆಯು, ಮಧ್ಯಾಹ್ನ ಕೆಲಕಾಲ ಬಿಡುವು ನೀಡಿತ್ತು. ಸಂಜೆ ಮೂರರ ಬಳಿಕ ಪುನಃ ಸುರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ತಾಲ್ಲೂಕಿನ ಊರುಬಗೆ, ದೇವರುಂದ, ಗುತ್ತಿ, ಮೂಲರಹಳ್ಳಿ, ದೇವರಮನೆ, ಮೇಕನಗದ್ದೆ, ದೇವರುಂದ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಮಳೆಯೊಂದಿಗೆ ಗಾಳಿಯ ರಭಸವೂ ಹೆಚ್ಚಾಗಿದ್ದರಿಂದ ಶುಕ್ರವಾರವೂ ಕಾಫಿ ತೋಟಗಳಲ್ಲಿನ ಕೃಷಿ ಚಟುವಟಿಕೆಗೆ ಬಿಡುವು ನೀಡಲಾಗಿತ್ತು.