ಮಳೆಯಿಂದಾಗಿ ಕೆಲವೆಡೆ ಬೆಳೆಗಳು ಹಾನಿಯಾಗಿವೆ. ಹೀಗಾಗಿ, ಮಾರುಕಟ್ಟೆಗೆ ಕೆಲ ತರಕಾರಿಗಳ ಆವಕ ಕಡಿಮೆಯಾಗಿದೆ. ಟೊಮೆಟೊ, ಸಾಂಬಾರು ಸೌತೆ, ಸೌತೆಕಾಯಿ ಈ ತರಕಾರಿಗಳ ದರ ಕೆ.ಜಿ ₹ 10ರಿಂದ ₹ 20 ಆಸುಪಾಸಿನಲ್ಲಿವೆ. ಸೊಪ್ಪಿನ ಬೆಲೆಯೂ ತುಸು ಜಾಸ್ತಿಯಾಗಿದೆ. ಕೊತ್ತುಂಬರಿ, ದಂಟು ಸೊಪ್ಪು ಕಟ್ಟಿಗೆ ₹ 6ರಿಂದ ₹ 10 ದರ ಇದೆ.