ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಹುತೇಕ ಕಡೆ ಭಾನುವರ ರಾತ್ರಿ ಮಳೆ ಸುರಿದಿದ್ದು, ಎಲ್ಲೆಡೆ ತಂಪೆರೆದಿದೆ.
ಮಧ್ಯರಾತ್ರಿ ಆರಂಭವಾದ ಮಳೆ ಎಡಬಿಡದೆ ಗಂಟೆ ಗಟ್ಟೆಲೆ ಸುರಿಯಿತು. ಬರದಿಂದ ಬಳಲಿದ್ದ ಕಡೂರು, ತರೀಕೆರೆ ತಾಲ್ಲೂಕಿನಲ್ಲಿ ಹದ ಮಳೆಯಾಗಿದೆ.
ಅಜ್ಜಂಪುರ ತಾಲ್ಲೂಕಿನ ಹಲವೆಡೆ ಸಾಧಾರಣ ಮಳೆಯಾಗಿದೆ. ಅತೀ ಹೆಚ್ಚು ನೀರಿನ ತೊಂದರೆ ಅನುಭವಿಸುತ್ತಿರುವ ಶಿವನಿ ಹೋಬಳಿಯಲ್ಲಿ ಮಳೆಯಾಗಿಲ್ಲ. ಒಂದೆರಡು ದಿನದಲ್ಲಿ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಮಲೆನಾಡು ಭಾಗವಾದ ಎನ್.ಆರ್.ಪುರ, ಶೃಂಗೇರಿ, ಕಳಸ, ಬಾಳೆಹೊನ್ನೂರು, ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಸಂತಸ ಉಂಟು ಮಾಡಿದೆ.