ಚಾರ್ಮಾಡಿ ಬಂದ್ ವದಂತಿ: ಮಳೆಯಿಂದ ತಾಲ್ಲೂಕಿನ ಚಾರ್ಮಾಡಿ ಘಾಟಿ ಬಂದ್ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ್ದರಿಂದ ವಾಹನ ಸವಾರರು ಪರದಾಡಿದರು. ಕೆಲವು ಸರಕು ಸಾಗಾಣೆ ವಾಹನಗಳು ಸಕಲೇಶಪುರ ಮಾರ್ಗವಾಗಿ ಶಿರಾಡಿ ಘಾಟಿ ಮೂಲಕ ಸಂಚರಿಸುತ್ತಿದ್ದ ದೃಶ್ಯ ಕಂಡು ಬಂತು. ಚಾರ್ಮಾಡಿ ಘಾಟಿ ಬಂದ್ ಆಗಿಲ್ಲ ಎಂಬ ಮಾಹಿತಿ ಬಂದ ಬಳಿಕ, ಸಂಜೆ ವೇಳೆಗೆ ಸಂಚಾರ ಸುಗಮಗೊಂಡಿತು.