<p><strong>ಚಿಕ್ಕಮಗಳೂರು: </strong>ನಗರದಲ್ಲಿ ‘ರ್ಯಾಲಿ ಆಫ್ ಚಿಕ್ಕಮಗಳೂರು’ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಲಾಯಿತು.</p>.<p>ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಸಿರಿ ನೇಚರ್ ರೂಟ್ಸ್ ಆವರಣದಲ್ಲಿ ರ್ಯಾಲಿಗೆ ಹಸಿರು ನಿಶಾನೆ ತೋರಿದರು. ಚಿಕ್ಕಮಗಳೂರು ಸುತ್ತಲಿನ ಪ್ರದೇಶದಲ್ಲಿ, ಎರಡು ಹಂತದಲ್ಲಿ (ಲೆಗ್ 1 ಮತ್ತು 2 ) ರ್ಯಾಲಿ ನಡೆಯಲಿದೆ</p>.<p>ಮೊದಲ ಹಂತದಲ್ಲಿ ಸರಿ ನೇಚರ್ ರೂಟ್ಸ್– ಖಾಂಡ್ಯಾ– ಚಿಕ್ಕಮಗಳೂರು ಮಾರ್ಗ ನಿಗದಿಪಡಿಸಲಾಗಿದೆ. ಒಟ್ಟು 180 ಕಿ.ಮೀ ಕ್ರಮಿಸಬೇಕಿದೆ. ಲೆಗ್– 2 ಹಂತ ಶನಿವಾರ ನಡೆಯಲಿದೆ. ಈ ಹಂತದಲ್ಲಿ 50 ಕಿ.ಮೀ ಕ್ರಮಿಸಬೇಕಿದೆ. ಒಟ್ಟು ಏಳು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.</p>.<p>‘ದೆಹಲಿ, ಮುಂಬೈ, ಈರೋಡ್, ಬೆಂಗಳೂರು, ಮಂಗಳೂರು, ಮತ್ತು ಸ್ಥಳೀಯರು ಸಹಿತ ಒಟ್ಟು 30 ಸ್ಪರ್ಧಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ’ ಎಂದು ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ (ಎಂಎಸ್ಸಿಸಿ) ಉಪಾಧ್ಯಕ್ಷ ಫಾರೂಕ್ ತಿಳಿಸಿದರು.</p>.<p>‘ಟೈಪ್ ಸ್ಪೀಡ್ ಡಿಸ್ಟೆನ್ಸ್ (ಟಿಎಸ್ಡಿ) ರೂಪದಲ್ಲಿ ಈ ರ್ಯಾಲಿ ನಡೆಯುತ್ತದೆ. ಲೆಕ್ಕಾಚಾರ, ನಿಖರ ಚಾಲನೆ ಮಾಡುವುದು ಮುಖ್ಯ. ಇದೊಂದು ಸಾಹಸ ರ್ಯಾಲಿ’ ಎಂದು ಸ್ಪರ್ಧಿಗಳಾದ ಕಾಶಿಪ್ರಸಾದ್, ನಿಖಿತಾ ಪ್ರಸಾದ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ನಗರದಲ್ಲಿ ‘ರ್ಯಾಲಿ ಆಫ್ ಚಿಕ್ಕಮಗಳೂರು’ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಲಾಯಿತು.</p>.<p>ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಸಿರಿ ನೇಚರ್ ರೂಟ್ಸ್ ಆವರಣದಲ್ಲಿ ರ್ಯಾಲಿಗೆ ಹಸಿರು ನಿಶಾನೆ ತೋರಿದರು. ಚಿಕ್ಕಮಗಳೂರು ಸುತ್ತಲಿನ ಪ್ರದೇಶದಲ್ಲಿ, ಎರಡು ಹಂತದಲ್ಲಿ (ಲೆಗ್ 1 ಮತ್ತು 2 ) ರ್ಯಾಲಿ ನಡೆಯಲಿದೆ</p>.<p>ಮೊದಲ ಹಂತದಲ್ಲಿ ಸರಿ ನೇಚರ್ ರೂಟ್ಸ್– ಖಾಂಡ್ಯಾ– ಚಿಕ್ಕಮಗಳೂರು ಮಾರ್ಗ ನಿಗದಿಪಡಿಸಲಾಗಿದೆ. ಒಟ್ಟು 180 ಕಿ.ಮೀ ಕ್ರಮಿಸಬೇಕಿದೆ. ಲೆಗ್– 2 ಹಂತ ಶನಿವಾರ ನಡೆಯಲಿದೆ. ಈ ಹಂತದಲ್ಲಿ 50 ಕಿ.ಮೀ ಕ್ರಮಿಸಬೇಕಿದೆ. ಒಟ್ಟು ಏಳು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.</p>.<p>‘ದೆಹಲಿ, ಮುಂಬೈ, ಈರೋಡ್, ಬೆಂಗಳೂರು, ಮಂಗಳೂರು, ಮತ್ತು ಸ್ಥಳೀಯರು ಸಹಿತ ಒಟ್ಟು 30 ಸ್ಪರ್ಧಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ’ ಎಂದು ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ (ಎಂಎಸ್ಸಿಸಿ) ಉಪಾಧ್ಯಕ್ಷ ಫಾರೂಕ್ ತಿಳಿಸಿದರು.</p>.<p>‘ಟೈಪ್ ಸ್ಪೀಡ್ ಡಿಸ್ಟೆನ್ಸ್ (ಟಿಎಸ್ಡಿ) ರೂಪದಲ್ಲಿ ಈ ರ್ಯಾಲಿ ನಡೆಯುತ್ತದೆ. ಲೆಕ್ಕಾಚಾರ, ನಿಖರ ಚಾಲನೆ ಮಾಡುವುದು ಮುಖ್ಯ. ಇದೊಂದು ಸಾಹಸ ರ್ಯಾಲಿ’ ಎಂದು ಸ್ಪರ್ಧಿಗಳಾದ ಕಾಶಿಪ್ರಸಾದ್, ನಿಖಿತಾ ಪ್ರಸಾದ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>