‘ಒಳಚರಂಡಿ ಕಾಮಗಾರಿಗೆ ಅಗೆದಿದ್ದರು, ಪೈಪು ಅಳವಡಿಸಿದ ನಂತರ ಮಣ್ಣು ಹಾಕಿ ಮುಚ್ಚಿದ್ದಾರೆ. ಡಾಂಬರು ಹಾಕಿಲ್ಲ, ಸರಿಯಾಗಿ ದುರಸ್ತಿ ಮಾಡಿಲ್ಲ. ಮೊಣಕಾಲುದ್ದ ಗುಂಡಿಯಾಗಿದೆ. ಈಚೆಗೆ ಜೀಪೊಂದು ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ರಾತ್ರಿ ವೇಳೆ ಗುಂಡಿ ಗೊತ್ತಾಗದೆ ದ್ವಿಚಕ್ರವಾಹನ ಸವಾರರು ಬಿದ್ದಿರುವ ಉದಾರಣೆಗಳು ಇವೆ’ ಎಂದು ಆಟೋ ಚಾಲಕ ಲೋಕೇಶ್ ಒತ್ತಾಯಿಸಿದರು.