‘ಗಿರಿ ಶ್ರೇಣಿಯಲ್ಲಿ ಕಳೆದ ವಾರ 10 ಸೆಂ. ಮೀ ಮಳೆ ಬಿದ್ದಿದೆ. ಇದು ಸೂಕ್ಷ್ಮ ಪ್ರದೇಶ. ಇಲ್ಲಿನ ಮಣ್ಣು ಬೇಗ ಕುಸಿಯುತ್ತದೆ, ತಾಳಿಕೆ ಸಾಮರ್ಥ್ಯ ಕಡಿಮೆ. ರಸ್ತೆ ಅಂಚಿನಲ್ಲಿ ವಾಹನ ನಿಲುಗಡೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಮತ್ತು ಈ ಪ್ರದೇಶದಲ್ಲಿ ನಿಗಾಕ್ಕೆ ಹೆಚ್ಚು ಪೊಲೀಸರನ್ನು ನಿಯೋಜಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆ ಸಂಚಾಲಕ ಕೆ.ಎಸ್.ಗುರುವೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.