<p><strong>ಚಿಕ್ಕಮಗಳೂರು:</strong> ತಾಲ್ಲೂಕಿನ ಗಿರಿ ಶ್ರೇಣಿ ಮಾರ್ಗದಲ್ಲಿ ಪ್ರವಾಸಿ ವಾಹನಗಳ ದಾಂಗುಡಿ, ಯರ್ರಾಬಿರ್ರಿ ನಿಲುಗಡೆಯಿಂದ ಸಂಚಾರ ತಾಪತ್ರಯ ಹೇಳತೀರದಾಗಿದೆ.</p>.<p>ಮುಳ್ಳಯ್ಯನ ಗಿರಿಯ ಮುಳ್ಳಪ್ಪ ದೇಗುಲ ಸನಿಹದಲ್ಲಿ ವಾಹನ ನಿಲುಗಡೆಗೆ (ಪಾರ್ಕಿಂಗ್) ಜಾಗ ಇದೆ. ಅಲ್ಲಿ ಸ್ಥಳಾವಕಾಶ ಇದ್ದರೂ ವಾಹನಗಳನ್ನು ನಿಲ್ಲಿಸುವವರು ಬಹಳ ಕಡಿಮೆ. ಮುಳ್ಳಯ್ಯನ ಗಿರಿ ಬಳಿ (ಒಂದು ಕಿ.ಮೀ ಅಂತರ) ರಸ್ತೆ ಅಂಚಿನಲ್ಲೇ ಸಾಲಾಗಿ ವಾಹನ ನಿಲುಗಡೆ ಮಾಡುತ್ತಾರೆ. ಪ್ರವಾಸಿಗರ ಈ ಪರಿಪಾಟ ಸಂಕಷ್ಟ ತಂದೊಡ್ಡಿದೆ.</p>.<p>ರಸ್ತೆ ಅಂಚಿನಲ್ಲಿ ನಿಂತಿರುವ ವಾಹನಗಳು ಮತ್ತು ಸಂಚಾರ ದಟ್ಟಣೆ ನಡುವೆ ಸಾಗುವುದೇ ಸವಾಲಾಗಿದೆ. ಇಕ್ಕಟ್ಟಿನ ನಡುವೆ ವಾಹನ ಚಲಾಯಿಸಲು ಚಾಲಕರು ಗೋಳಾಡಬೇಕು.</p>.<p>ರಾಜ್ಯದ ಅತಿ ಎತ್ತರದ ಗಿರಿ ಪ್ರದೇಶ ಇದು. ಮಾರ್ಗದ ಕೆಲವೆಡೆ ಲೋಹದ ತಡೆಗೋಡೆ ಇದೆ. ಮಳೆಯಿಂದಾಗಿ ರಸ್ತೆಯ ಕೆಲವಡೆ ಕೊರಕಲಾಗಿದೆ. ರಸ್ತೆಯಲ್ಲಿ ಕಂದಕಗಳಾಗಿವೆ. ಸಾಗುವಾಗ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.</p>.<p>ರಸ್ತೆ ಅಂಚಿನಲ್ಲಿ ಒಬ್ಬರು ವಾಹನ ನಿಲ್ಲಿಸಿದ್ದರೆ ಅದರ ಹಿಂದೆ ನೂರಾರು ಸಾಲುಗಟ್ಟುತ್ತವೆ. ವಾಹನಗಳ ಸಾಲು ನೋಡಿ ಎಷ್ಟೋ ಮಂದಿ ಮುಂದಕ್ಕೆ ತೆರಳದೆ ಅರ್ಧ ದಾರಿಯಿಂದಲೇ ವಾಹನ ತಿರುಗಿಸಿಕೊಂಡು ಹಿಂತಿರುಗಿದ ನಿದರ್ಶನಗಳು ಇವೆ.</p>.<p>ಸಾಲು ರಜೆ ದಿನಗಳು, ವಾರಾಂತ್ಯದಲ್ಲಿ ಪ್ರವಾಸಿಗರ ದಂಡು ಹೆಚ್ಚು ಇರುತ್ತದೆ. ಇಂಥ ದಿನಗಳಲ್ಲಿ ರಸ್ತೆ ಅಂಚಿನಲ್ಲಿ ಮಾರ್ನಾಲ್ಕು ಕಿ.ಮೀ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.</p>.<p>‘ಗಿರಿ ಶ್ರೇಣಿಯಲ್ಲಿ ಕಳೆದ ವಾರ 10 ಸೆಂ. ಮೀ ಮಳೆ ಬಿದ್ದಿದೆ. ಇದು ಸೂಕ್ಷ್ಮ ಪ್ರದೇಶ. ಇಲ್ಲಿನ ಮಣ್ಣು ಬೇಗ ಕುಸಿಯುತ್ತದೆ, ತಾಳಿಕೆ ಸಾಮರ್ಥ್ಯ ಕಡಿಮೆ. ರಸ್ತೆ ಅಂಚಿನಲ್ಲಿ ವಾಹನ ನಿಲುಗಡೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಮತ್ತು ಈ ಪ್ರದೇಶದಲ್ಲಿ ನಿಗಾಕ್ಕೆ ಹೆಚ್ಚು ಪೊಲೀಸರನ್ನು ನಿಯೋಜಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆ ಸಂಚಾಲಕ ಕೆ.ಎಸ್.ಗುರುವೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಸೀತಾಳಯ್ಯನ ಗಿರಿಯಲ್ಲಿಯೇ ಪ್ರವಾಸಿಗರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಮುಳ್ಳಯ್ಯನ ಗಿರಿಗೆ ಕಾಲ್ನಡಿಗೆಯಲ್ಲಿ ಸಾಗುವಂತೆ ಮಾಡಬೇಕು.ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ತಾಲ್ಲೂಕಿನ ಗಿರಿ ಶ್ರೇಣಿ ಮಾರ್ಗದಲ್ಲಿ ಪ್ರವಾಸಿ ವಾಹನಗಳ ದಾಂಗುಡಿ, ಯರ್ರಾಬಿರ್ರಿ ನಿಲುಗಡೆಯಿಂದ ಸಂಚಾರ ತಾಪತ್ರಯ ಹೇಳತೀರದಾಗಿದೆ.</p>.<p>ಮುಳ್ಳಯ್ಯನ ಗಿರಿಯ ಮುಳ್ಳಪ್ಪ ದೇಗುಲ ಸನಿಹದಲ್ಲಿ ವಾಹನ ನಿಲುಗಡೆಗೆ (ಪಾರ್ಕಿಂಗ್) ಜಾಗ ಇದೆ. ಅಲ್ಲಿ ಸ್ಥಳಾವಕಾಶ ಇದ್ದರೂ ವಾಹನಗಳನ್ನು ನಿಲ್ಲಿಸುವವರು ಬಹಳ ಕಡಿಮೆ. ಮುಳ್ಳಯ್ಯನ ಗಿರಿ ಬಳಿ (ಒಂದು ಕಿ.ಮೀ ಅಂತರ) ರಸ್ತೆ ಅಂಚಿನಲ್ಲೇ ಸಾಲಾಗಿ ವಾಹನ ನಿಲುಗಡೆ ಮಾಡುತ್ತಾರೆ. ಪ್ರವಾಸಿಗರ ಈ ಪರಿಪಾಟ ಸಂಕಷ್ಟ ತಂದೊಡ್ಡಿದೆ.</p>.<p>ರಸ್ತೆ ಅಂಚಿನಲ್ಲಿ ನಿಂತಿರುವ ವಾಹನಗಳು ಮತ್ತು ಸಂಚಾರ ದಟ್ಟಣೆ ನಡುವೆ ಸಾಗುವುದೇ ಸವಾಲಾಗಿದೆ. ಇಕ್ಕಟ್ಟಿನ ನಡುವೆ ವಾಹನ ಚಲಾಯಿಸಲು ಚಾಲಕರು ಗೋಳಾಡಬೇಕು.</p>.<p>ರಾಜ್ಯದ ಅತಿ ಎತ್ತರದ ಗಿರಿ ಪ್ರದೇಶ ಇದು. ಮಾರ್ಗದ ಕೆಲವೆಡೆ ಲೋಹದ ತಡೆಗೋಡೆ ಇದೆ. ಮಳೆಯಿಂದಾಗಿ ರಸ್ತೆಯ ಕೆಲವಡೆ ಕೊರಕಲಾಗಿದೆ. ರಸ್ತೆಯಲ್ಲಿ ಕಂದಕಗಳಾಗಿವೆ. ಸಾಗುವಾಗ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.</p>.<p>ರಸ್ತೆ ಅಂಚಿನಲ್ಲಿ ಒಬ್ಬರು ವಾಹನ ನಿಲ್ಲಿಸಿದ್ದರೆ ಅದರ ಹಿಂದೆ ನೂರಾರು ಸಾಲುಗಟ್ಟುತ್ತವೆ. ವಾಹನಗಳ ಸಾಲು ನೋಡಿ ಎಷ್ಟೋ ಮಂದಿ ಮುಂದಕ್ಕೆ ತೆರಳದೆ ಅರ್ಧ ದಾರಿಯಿಂದಲೇ ವಾಹನ ತಿರುಗಿಸಿಕೊಂಡು ಹಿಂತಿರುಗಿದ ನಿದರ್ಶನಗಳು ಇವೆ.</p>.<p>ಸಾಲು ರಜೆ ದಿನಗಳು, ವಾರಾಂತ್ಯದಲ್ಲಿ ಪ್ರವಾಸಿಗರ ದಂಡು ಹೆಚ್ಚು ಇರುತ್ತದೆ. ಇಂಥ ದಿನಗಳಲ್ಲಿ ರಸ್ತೆ ಅಂಚಿನಲ್ಲಿ ಮಾರ್ನಾಲ್ಕು ಕಿ.ಮೀ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.</p>.<p>‘ಗಿರಿ ಶ್ರೇಣಿಯಲ್ಲಿ ಕಳೆದ ವಾರ 10 ಸೆಂ. ಮೀ ಮಳೆ ಬಿದ್ದಿದೆ. ಇದು ಸೂಕ್ಷ್ಮ ಪ್ರದೇಶ. ಇಲ್ಲಿನ ಮಣ್ಣು ಬೇಗ ಕುಸಿಯುತ್ತದೆ, ತಾಳಿಕೆ ಸಾಮರ್ಥ್ಯ ಕಡಿಮೆ. ರಸ್ತೆ ಅಂಚಿನಲ್ಲಿ ವಾಹನ ನಿಲುಗಡೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಮತ್ತು ಈ ಪ್ರದೇಶದಲ್ಲಿ ನಿಗಾಕ್ಕೆ ಹೆಚ್ಚು ಪೊಲೀಸರನ್ನು ನಿಯೋಜಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆ ಸಂಚಾಲಕ ಕೆ.ಎಸ್.ಗುರುವೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಸೀತಾಳಯ್ಯನ ಗಿರಿಯಲ್ಲಿಯೇ ಪ್ರವಾಸಿಗರ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಮುಳ್ಳಯ್ಯನ ಗಿರಿಗೆ ಕಾಲ್ನಡಿಗೆಯಲ್ಲಿ ಸಾಗುವಂತೆ ಮಾಡಬೇಕು.ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>