<p><strong>ನರಸಿಂಹರಾಜಪುರ</strong>: ತಾಲ್ಲೂಕಿನ ವ್ಯಾಪ್ತಿಯ ಆರಂಬಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಜುಲೈ 23ರಂದು ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಭದ್ರಾವತಿ ತಾಲ್ಲೂಕು ಹಿರಿಯೂರಿನ ತಾರಿಕಟ್ಟೆ ನಿವಾಸಿ ಸತ್ಯಾನಂದ, ಭದ್ರಾವತಿ ತಾಲ್ಲೂಕು ಹಿರಿಯೂರು ಅಪ್ಪಾಜಿ ಬಡಾವಣೆ ನಿವಾಸಿ ಸೈಯದ್ ಲತೀಪ್ ಹಾಗೂ ಭದ್ರಾವತಿ ಜಂಕ್ಷನ್ ನಿವಾಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತ ಆರೋಪಿಯಾಗಿದ್ದಾರೆ.</p>.<p>ಕಳೆದ ಜುಲೈ23ರಂದು ತೀರ್ಥಹಳ್ಳಿಯಿಂದ ಚಾಲಕ ಮನು ಮತ್ತು ಸಹಾಯಕ ದರ್ಶನ್ ನರಸಿಂಹರಾಜಪುರಕ್ಕೆ ಬಂದು ಕೋಳಿಗಳನ್ನು ಮಾರಾಟ ಮಾಡಿ ಮಾರಾಟ ಮಾಡಿದ ₹2 ಲಕ್ಷ ಹಣವನ್ನು ತೆಗೆದುಕೊಂಡು ವಾಪಸ್ ಹೋಗುತ್ತಿದ್ದಾಗ ಪಿಕಪ್ ವಾಹನಕ್ಕೆ ತಾಲ್ಲೂಕಿನ ಶಿವಮೊಗ್ಗ ರಸ್ತೆಯ ಆರಂಬಳ್ಳಿ ಬಸ್ ನಿಲ್ದಾಣ ಬಳಿ ಅಡ್ಡಗಟ್ಟಿ 3 ಮೊಬೈಲ್, ಬೆಳ್ಳಿಯ ಆಭರಣ, ₹ 2 ಲಕ್ಷ ಹಣವನ್ನು ದೋಚಿ ಹೋಗಿದ್ದರು. ಈ ಬಗ್ಗೆ ಅಭಿಷೇಕ್ ಎಂಬುವರು ದೂರು ನೀಡಿದ್ದರು.</p>.<p>ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಬೆಳ್ಳಿ ಬ್ರಾಸ್ಲೈಟ್, ಬೆಳ್ಳಿ ಸರ, 2 ಮೊಬೈಲ್, ಒಂದು ಸೌಂಡ್ ಸಿಸ್ಟಂ, ಕೃತ್ಯಕ್ಕೆ ಬಳಸಿದ ಹೊಂಡಾ ಸಿಟಿ ಕಾರು, ಲಾಂಗ್, ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ₹2.55 ಲಕ್ಷ ಎಂದು ಅಂದಾಜಿಸಲಾಗಿದೆ.</p>.<p>ಪೊಲೀಸ್ ಇನ್ಸ್ಪೆಕ್ಟರ್ ಬಿ.ಎಸ್.ನಿರಂಜನ್ ಗೌಡ ನೇತೃತ್ವದಲ್ಲಿ ಪಿ.ಎ.ಬಿನು, ಅಮಿತ್ ಚೌಗುಲೆ, ದೇವರಾಜ, ಮಧು, ಯುಗಾಂಧರ್, ಶಿವರುದ್ರಪ್ಪ, ಎಚ್.ಸಿ.ಕೌಶಿಕ್, ಕೆ.ಜೆ.ಶಂಕರ್ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ</strong>: ತಾಲ್ಲೂಕಿನ ವ್ಯಾಪ್ತಿಯ ಆರಂಬಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಜುಲೈ 23ರಂದು ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಭದ್ರಾವತಿ ತಾಲ್ಲೂಕು ಹಿರಿಯೂರಿನ ತಾರಿಕಟ್ಟೆ ನಿವಾಸಿ ಸತ್ಯಾನಂದ, ಭದ್ರಾವತಿ ತಾಲ್ಲೂಕು ಹಿರಿಯೂರು ಅಪ್ಪಾಜಿ ಬಡಾವಣೆ ನಿವಾಸಿ ಸೈಯದ್ ಲತೀಪ್ ಹಾಗೂ ಭದ್ರಾವತಿ ಜಂಕ್ಷನ್ ನಿವಾಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತ ಆರೋಪಿಯಾಗಿದ್ದಾರೆ.</p>.<p>ಕಳೆದ ಜುಲೈ23ರಂದು ತೀರ್ಥಹಳ್ಳಿಯಿಂದ ಚಾಲಕ ಮನು ಮತ್ತು ಸಹಾಯಕ ದರ್ಶನ್ ನರಸಿಂಹರಾಜಪುರಕ್ಕೆ ಬಂದು ಕೋಳಿಗಳನ್ನು ಮಾರಾಟ ಮಾಡಿ ಮಾರಾಟ ಮಾಡಿದ ₹2 ಲಕ್ಷ ಹಣವನ್ನು ತೆಗೆದುಕೊಂಡು ವಾಪಸ್ ಹೋಗುತ್ತಿದ್ದಾಗ ಪಿಕಪ್ ವಾಹನಕ್ಕೆ ತಾಲ್ಲೂಕಿನ ಶಿವಮೊಗ್ಗ ರಸ್ತೆಯ ಆರಂಬಳ್ಳಿ ಬಸ್ ನಿಲ್ದಾಣ ಬಳಿ ಅಡ್ಡಗಟ್ಟಿ 3 ಮೊಬೈಲ್, ಬೆಳ್ಳಿಯ ಆಭರಣ, ₹ 2 ಲಕ್ಷ ಹಣವನ್ನು ದೋಚಿ ಹೋಗಿದ್ದರು. ಈ ಬಗ್ಗೆ ಅಭಿಷೇಕ್ ಎಂಬುವರು ದೂರು ನೀಡಿದ್ದರು.</p>.<p>ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಬೆಳ್ಳಿ ಬ್ರಾಸ್ಲೈಟ್, ಬೆಳ್ಳಿ ಸರ, 2 ಮೊಬೈಲ್, ಒಂದು ಸೌಂಡ್ ಸಿಸ್ಟಂ, ಕೃತ್ಯಕ್ಕೆ ಬಳಸಿದ ಹೊಂಡಾ ಸಿಟಿ ಕಾರು, ಲಾಂಗ್, ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ₹2.55 ಲಕ್ಷ ಎಂದು ಅಂದಾಜಿಸಲಾಗಿದೆ.</p>.<p>ಪೊಲೀಸ್ ಇನ್ಸ್ಪೆಕ್ಟರ್ ಬಿ.ಎಸ್.ನಿರಂಜನ್ ಗೌಡ ನೇತೃತ್ವದಲ್ಲಿ ಪಿ.ಎ.ಬಿನು, ಅಮಿತ್ ಚೌಗುಲೆ, ದೇವರಾಜ, ಮಧು, ಯುಗಾಂಧರ್, ಶಿವರುದ್ರಪ್ಪ, ಎಚ್.ಸಿ.ಕೌಶಿಕ್, ಕೆ.ಜೆ.ಶಂಕರ್ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>