ಕೊಪ್ಪ: ಮೇಲಿನ ಪೇಟೆಯಲ್ಲಿರುವ ಆರೂರು ಲಕ್ಷ್ಮೀನಾರಾಯಣ ರಾವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಭತ್ತದ ಗದ್ದೆಯಲ್ಲಿ ನಾಟಿ ಮಾಡಿ, ಕೃಷಿ ಅನುಭವ ಪಡೆದುಕೊಂಡರು.
ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ನೌಕರ ಪ್ರಕಾಶ್ ಶೆಟ್ಟಿ ಅವರ ಗದ್ದೆಯಲ್ಲಿ ಪ್ರಾತ್ಯಕ್ಷಿಕೆ ನಡೆಯಿತು. ಶಾಲಾ ಮಕ್ಕಳು ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಕೆಸರಿನಲ್ಲಿ ಮಿಂದೆದ್ದರು. ಕೃಷಿ ಕಲೆಯ ಪ್ರತ್ಯಕ್ಷ ದರ್ಶನಕ್ಕೆ ಸಾಕ್ಷಿಯಾದರು.
ಅಮೃತ ಸಿಂಚನ ಟ್ರಸ್ಟ್ನ ಜಾನ್ ಪೆರಿಸ್, ಪ್ರಕಾಶ್ ಶೆಟ್ಟಿ, ಸತ್ಯಜಿತ್ ಶೆಟ್ಟಿ, ರತ್ನಾಕರ್, ಶಿವಾನಂದ್, ಹರೀಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಬ್ರೀನ್, ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕರಾದ ತಬಸುಮ್, ಮಂಗಳ, ಜಯಶ್ರೀ, ಹೀನ ಕೌಸರ್ ಇದ್ದರು.