<p>ಶೃಂಗೇರಿ: ‘ಹಿರಿಯರು ನಮಗಾಗಿ ಸಾಕಷ್ಟು ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ. ಸಂಸ್ಕೃತಿ ಎಂದರೆ ಸೇವಾ ಮನೋಭಾವ. ಈ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಭಾರತಿ ಹೇಳಿದರು.</p>.<p>ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಹುಡುಗಾಟದ ಬದುಕು ವ್ಯರ್ಥ, ಹುಡುಕಾಟದ ಬದುಕು ಸಾರ್ಥಕ. ಪದವಿ ನಂತರ ಜೀವನದಲ್ಲಿ ಸಾಕಷ್ಟು ಸವಾಲುಗಳಿವೆ. ಧೈರ್ಯದಿಂದ ಎದುರಿಸಿ’ ಎಂದರು.</p>.<p>ವರ್ಗಾವಣೆ ಗೊಂಡ ಪ್ರಾಧ್ಯಾಪಕ ಯೋಗಿಶ್ ಸನ್ಮಾನ ಸ್ವೀಕರಿಸಿ,‘ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತೀರ್ಣಗೊಂಡು, ಜೀವನದಲ್ಲೂ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.<br />ಸಾಂಸ್ಕೃತಿಕ ಸಂಯೋಜಕಿ ಆಶಾ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.</p>.<p>ಪ್ರಾಧ್ಯಾಪಕರಾದ ಕಿರಣ್, ತೇಜಸ್ವಿನಿ, ಮಂಜುನಾಥ, ರಾಘವೇಂದ್ರ ಪ್ರಸಾದ್, ಮಂಜುಳಾ, ಸರಸ್ವತಿ ಹೆಗ್ಡೆ, ರಾಘವೇಂದ್ರ ರೆಡ್ಡಿ, ಪೂರ್ಣೇಶ್, ಮಮತಾ, ಚೇತನ್, ರವಿಶಂಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶೃಂಗೇರಿ: ‘ಹಿರಿಯರು ನಮಗಾಗಿ ಸಾಕಷ್ಟು ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ. ಸಂಸ್ಕೃತಿ ಎಂದರೆ ಸೇವಾ ಮನೋಭಾವ. ಈ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಭಾರತಿ ಹೇಳಿದರು.</p>.<p>ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಹುಡುಗಾಟದ ಬದುಕು ವ್ಯರ್ಥ, ಹುಡುಕಾಟದ ಬದುಕು ಸಾರ್ಥಕ. ಪದವಿ ನಂತರ ಜೀವನದಲ್ಲಿ ಸಾಕಷ್ಟು ಸವಾಲುಗಳಿವೆ. ಧೈರ್ಯದಿಂದ ಎದುರಿಸಿ’ ಎಂದರು.</p>.<p>ವರ್ಗಾವಣೆ ಗೊಂಡ ಪ್ರಾಧ್ಯಾಪಕ ಯೋಗಿಶ್ ಸನ್ಮಾನ ಸ್ವೀಕರಿಸಿ,‘ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತೀರ್ಣಗೊಂಡು, ಜೀವನದಲ್ಲೂ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.<br />ಸಾಂಸ್ಕೃತಿಕ ಸಂಯೋಜಕಿ ಆಶಾ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.</p>.<p>ಪ್ರಾಧ್ಯಾಪಕರಾದ ಕಿರಣ್, ತೇಜಸ್ವಿನಿ, ಮಂಜುನಾಥ, ರಾಘವೇಂದ್ರ ಪ್ರಸಾದ್, ಮಂಜುಳಾ, ಸರಸ್ವತಿ ಹೆಗ್ಡೆ, ರಾಘವೇಂದ್ರ ರೆಡ್ಡಿ, ಪೂರ್ಣೇಶ್, ಮಮತಾ, ಚೇತನ್, ರವಿಶಂಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>