ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿಕ್ಕಮಗಳೂರು | ಮನೆ ಬಾಗಿಲಿಗೆ ಕೊಳಚೆ ನೀರು

ಶಾಂತಿನಗರದಲ್ಲಿ ಮೂಲ ಸೌಕರ್ಯ ಮರೀಚಿಕೆ
ಉಮೇಶ್ ಯು.ಬಿ.
Published : 18 ಅಕ್ಟೋಬರ್ 2025, 5:25 IST
Last Updated : 18 ಅಕ್ಟೋಬರ್ 2025, 5:25 IST
ಫಾಲೋ ಮಾಡಿ
Comments
ಶಾಂತಿನಗರದಲ್ಲಿ ಚರಂಡಿಯಲ್ಲಿ ನೀರು ನಿಂತಿರುವುದು
ಶಾಂತಿನಗರದಲ್ಲಿ ಚರಂಡಿಯಲ್ಲಿ ನೀರು ನಿಂತಿರುವುದು
ಕುಡಿವ ನೀರಿನ ಸಮಸ್ಯೆ
ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ನಗರಸಭೆಯಿಂದ ಬರುವ ನೀರು ನಿತ್ಯ ಬಳಕೆ ಸಾಕಾಗುವುದಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡರು. ನಗರಸಭೆಯಿಂದ ಸರಿಯಾದ ಸಮಯಕ್ಕೆ ನೀರು ಬದುವುದಿಲ್ಲ. ಕುಡಿಯುವ ನೀರಿಗೆ ನಿತ್ಯ ಪರದಾಡುವಂತಾಗಿದೆ. ನೀರಿನಲ್ಲಿ ಮಣ್ಣು ಮಿಶ್ರಣವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ನಗರಸಭೆ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ನೀರಿನ ಸಮಸ್ಯೆ ನೀಗಿಸಬೇಕು ಎಂಬುದು ಅವರ ಒತ್ತಾಯ.
ರಸ್ತೆಯಲ್ಲೇ ಆಟ ವಾಯು ವಿಹಾರ
ಈ ಬಡಾವಣೆಯಲ್ಲಿ ಮಕ್ಕಳು ಹೆಚ್ಚಾಗಿದ್ದು ಆಟಕ್ಕೆ ಸೂಕ್ತ ಪಾರ್ಕ್ ಅಥವಾ ಮೈದಾನ ಇಲ್ಲವಾಗಿದೆ. ವೃದ್ಧರು ವಾಯು ವಿಹಾರ ಮಕ್ಕಳ ಆಟ ಎಲ್ಲದಕ್ಕೂರಸ್ತೆಯೇ ಗತಿಯಾಗಿದೆ. ರಸ್ತೆ ಕೂಡ ಕಿರಿದಾಗಿದ್ದು ಅಪಾಯದ ಸ್ಥಿತಿಯಲ್ಲಿ ವಾಹನ ಸಂಚಾರಿಸುತ್ತಿವೆ. ಅನೇಕ ವಾಹನ ಸವಾರರು ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದು ಅಪಘಾತ ಸಂಭವಿಸುತ್ತಿವೆ ಎಂದು ನಿವಾಸಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT