ಮಿಸ್ಟರಿ ಸಿನಿಮಾ ನಿರ್ದೇಶಕ ಆಕಾಶ್ ಜೋಷಿ ಮಾತನಾಡಿ, ಈ ಸಿನಿಮಾದ ಮೂಲಕ ಪ್ರಥಮ ಬಾರಿಗೆ ನಿರ್ದೇಶಕ ನಾಗಿ ಕೆಲಸ ಮಾಡುತ್ತಿದ್ದೇನೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಕಥೆಯನ್ನು ಆಯ್ದುಕೊಳ್ಳಲಾಗಿದೆ. ಸುನೀಲ್ ಹಾಗೂ ಆಕಾಶ ಪ್ರಭು ನಾಯಕ ನಟರಾಗಿದ್ದಾರೆ.ನಾಯಕಿಯಾಗಿ ಅಲೇನ ಹಾಗೂ ಗಟ್ಟಿ ಮೇಳದ ಧಾರವಾಹಿಯ ಆರತಿ ಪಡುಬಿದ್ರಿ, ಪ್ರಶಾಂತ ಸಂಬರಿಗಿ, ಮನೋಜ್, ರಾಜೇಶ್ ನಟಿಸಿದ್ದಾರೆ. ತೇಜಸ್ ಹಾಗೂ ಆಕಾಶ್ ಜೋಷಿ ಛಾಯಾಗ್ರಾಹಣ ಮಾಡುತ್ತಿದ್ದಾರೆ’ ಎಂದರು.