<p>ಜಯಪುರ(ಬಾಳೆಹೊನ್ನೂರು); ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿರುವ ‘ಸೀತಾವನ’ವನ್ನು ಸಾರ್ವಜನಿಕರಿಗೆ ನೋಡಲು ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ‘ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ’ಯನ್ನು ರಚಿಸಲಾಗಿದೆ ಎಂದು ಹಿಂದೂಪರ ಸಂಘಟಕ ಅಣ್ಣು ಮಂಜುನಾಥ್ ಹೇಳಿದರು.</p>.<p>ಚೌಡಿಕಟ್ಟೆಯ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಖಾಸಗಿ ಎಸ್ಟೇಟ್ ಮಾಲೀಕರು ಸೀತಾವನ ವೀಕ್ಷಣೆಗೆ ಅವಕಾಶ ನೀಡದೆ ತಕರಾರು ತೆಗೆದಿದ್ದಾರೆ. ಈ ಬಗ್ಗೆ ಮಾಲೀಕರ ಜೊತೆ ಸಂಘಟಕರು ಚರ್ಚಿಸಿದರೂ ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ. ಇದರಿಂದಾಗಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ.ಇದನ್ನು ಹಿಂದಿನಂತೆಯೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ ರಚಿಸಲಾಗಿದ್ದು ಹೋರಾಟದ ಮೂಲಕ ಹಿಂದೂಗಳ ಧಾರ್ಮಿಕ ಕೇಂದ್ರ ಉಳಿಸಲು ಯತ್ನಿಸಲಾಗುವುದು’ ಎಂದರು.</p>.<p>ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷರಾಗಿ ಕೇಶವ್, ಶ್ರೀಧರ್, ಸೋಮಶೇಖರ್ (ಉಪಾಧ್ಯಕ್ಷರು),ಮಂಜುನಾಥ್, ಅಣ್ಣು,(ಕಾರ್ಯದರ್ಶಿ),ಸಂಪತ್ ಕುಮಾರ್ (ಸಹಕಾರ್ಯದರ್ಶಿ), ಎ.ಎಸ್.ಪ್ರಸನ್ನ(ಖಜಾಂಚಿ) ಅನಿಲ್ಗೌಡ, ಮಾನಪ್ಪಗೌಡ (ಗೌರವಾಧ್ಯಕ್ಷರು) ಹಾಗೂ 20 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಯಪುರ(ಬಾಳೆಹೊನ್ನೂರು); ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿರುವ ‘ಸೀತಾವನ’ವನ್ನು ಸಾರ್ವಜನಿಕರಿಗೆ ನೋಡಲು ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ‘ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ’ಯನ್ನು ರಚಿಸಲಾಗಿದೆ ಎಂದು ಹಿಂದೂಪರ ಸಂಘಟಕ ಅಣ್ಣು ಮಂಜುನಾಥ್ ಹೇಳಿದರು.</p>.<p>ಚೌಡಿಕಟ್ಟೆಯ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.</p>.<p>ಖಾಸಗಿ ಎಸ್ಟೇಟ್ ಮಾಲೀಕರು ಸೀತಾವನ ವೀಕ್ಷಣೆಗೆ ಅವಕಾಶ ನೀಡದೆ ತಕರಾರು ತೆಗೆದಿದ್ದಾರೆ. ಈ ಬಗ್ಗೆ ಮಾಲೀಕರ ಜೊತೆ ಸಂಘಟಕರು ಚರ್ಚಿಸಿದರೂ ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ. ಇದರಿಂದಾಗಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ.ಇದನ್ನು ಹಿಂದಿನಂತೆಯೇ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ ರಚಿಸಲಾಗಿದ್ದು ಹೋರಾಟದ ಮೂಲಕ ಹಿಂದೂಗಳ ಧಾರ್ಮಿಕ ಕೇಂದ್ರ ಉಳಿಸಲು ಯತ್ನಿಸಲಾಗುವುದು’ ಎಂದರು.</p>.<p>ಸೀತಾವನ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷರಾಗಿ ಕೇಶವ್, ಶ್ರೀಧರ್, ಸೋಮಶೇಖರ್ (ಉಪಾಧ್ಯಕ್ಷರು),ಮಂಜುನಾಥ್, ಅಣ್ಣು,(ಕಾರ್ಯದರ್ಶಿ),ಸಂಪತ್ ಕುಮಾರ್ (ಸಹಕಾರ್ಯದರ್ಶಿ), ಎ.ಎಸ್.ಪ್ರಸನ್ನ(ಖಜಾಂಚಿ) ಅನಿಲ್ಗೌಡ, ಮಾನಪ್ಪಗೌಡ (ಗೌರವಾಧ್ಯಕ್ಷರು) ಹಾಗೂ 20 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>