<p><strong>ಕಡೂರು:</strong> ತಾಲ್ಲೂಕಿನ ಶಿವಗಂಗಾಗಿರಿ ಕ್ಷೇತ್ರದ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ.</p>.<p>ಮೃತ್ಯುಂಜಯ ದೇವಸ್ಥಾನದ ಬಾಗಿಲನ್ನು ಒಡೆದಿರುವ ಕಳ್ಳರು, ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಕಾರ್ಯಾಲಯಕ್ಕೂ ನುಗ್ಗಿ ಅಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾ ಸಿಸ್ಟಂ ಹಾಳು ಗೆಡವಿದ್ದಾರೆ.</p>.<p>ಬೀರುವಿನಲ್ಲಿಟ್ಟಿದ್ದ ₹50 ಸಾವಿರ ಹಣ ದೋಚಿದ್ದು, ಭಕ್ತರು ನೀಡಿದ್ದ 230 ಗ್ರಾಂ ಬೆಳ್ಳಿಯನ್ನು ಕೊಂಡೊಯ್ದಿದ್ದಾರೆ. ದೇವಸ್ಥಾನದ ಹುಂಡಿ ಒಡೆಯಲು ಯತ್ನಿಸಿದರೂ ಸಫಲರಾಗಿಲ್ಲ.</p>.<p>ಚೌಡಮ್ಮದೇವಿ ವಿಗ್ರಹದ ಕೊರಳಲ್ಲಿದ್ದ 4ಗ್ರಾಂ ಚಿನ್ನದ ಮಾಂಗಲ್ಯ, 1.5 ಗ್ರಾಂ ತೂಕದ ಮೂಗು ನತ್ತನ್ನೂ ಕದ್ದಿದ್ದಾರೆ. ಕಳ್ಳರು ಒಳಬರುವುದಕ್ಕೂ ಮುನ್ನ ದೇವಸ್ಥಾನದಲ್ಲಿ ಅಳವಡಿಸಿರುವ ಸೈರನ್ ವೈರ್ ಕತ್ತರಿಸಿದ್ದಾರೆ. ಕಾರ್ಯಾಲಯದಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾ ಡಿವಿಆರ್ನ್ನು ಹೊತ್ತೊಯ್ದಿದ್ದಾರೆ.</p>.<p>ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಲ್ಲೇದೇವರಹಳ್ಳಿ ದೇವರಾಜಪ್ಪ ಪಂಚನಹಳ್ಳಿ ಅವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ತಾಲ್ಲೂಕಿನ ಶಿವಗಂಗಾಗಿರಿ ಕ್ಷೇತ್ರದ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ.</p>.<p>ಮೃತ್ಯುಂಜಯ ದೇವಸ್ಥಾನದ ಬಾಗಿಲನ್ನು ಒಡೆದಿರುವ ಕಳ್ಳರು, ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಕಾರ್ಯಾಲಯಕ್ಕೂ ನುಗ್ಗಿ ಅಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾ ಸಿಸ್ಟಂ ಹಾಳು ಗೆಡವಿದ್ದಾರೆ.</p>.<p>ಬೀರುವಿನಲ್ಲಿಟ್ಟಿದ್ದ ₹50 ಸಾವಿರ ಹಣ ದೋಚಿದ್ದು, ಭಕ್ತರು ನೀಡಿದ್ದ 230 ಗ್ರಾಂ ಬೆಳ್ಳಿಯನ್ನು ಕೊಂಡೊಯ್ದಿದ್ದಾರೆ. ದೇವಸ್ಥಾನದ ಹುಂಡಿ ಒಡೆಯಲು ಯತ್ನಿಸಿದರೂ ಸಫಲರಾಗಿಲ್ಲ.</p>.<p>ಚೌಡಮ್ಮದೇವಿ ವಿಗ್ರಹದ ಕೊರಳಲ್ಲಿದ್ದ 4ಗ್ರಾಂ ಚಿನ್ನದ ಮಾಂಗಲ್ಯ, 1.5 ಗ್ರಾಂ ತೂಕದ ಮೂಗು ನತ್ತನ್ನೂ ಕದ್ದಿದ್ದಾರೆ. ಕಳ್ಳರು ಒಳಬರುವುದಕ್ಕೂ ಮುನ್ನ ದೇವಸ್ಥಾನದಲ್ಲಿ ಅಳವಡಿಸಿರುವ ಸೈರನ್ ವೈರ್ ಕತ್ತರಿಸಿದ್ದಾರೆ. ಕಾರ್ಯಾಲಯದಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾ ಡಿವಿಆರ್ನ್ನು ಹೊತ್ತೊಯ್ದಿದ್ದಾರೆ.</p>.<p>ಶಿವಗಂಗಾಗಿರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಲ್ಲೇದೇವರಹಳ್ಳಿ ದೇವರಾಜಪ್ಪ ಪಂಚನಹಳ್ಳಿ ಅವರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>