ಚಿಕ್ಕಮಗಳೂರು: ಮಳೆಗಾಳಿಗೆ ಮೂಡಿಗೆರೆ ತಾಲ್ಲೂಕಿನ ಕೆ.ತಲಗೂರಿನಲ್ಲಿ ಮಂಗಳವಾರ ರಾತ್ರಿ ಮನೆಯೊಂದರ ಮೇಲೆ ಬೃಹತ್ ವೃಕ್ಷವೊಂದು ಉರುಳಿದೆ. ಮನೆಯೊಳಗೆ ಮಲಗಿದ್ದ ಸರಿತಾ ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ, ಆಸ್ಪತ್ರೆಗೆ ಒಯ್ಯುವಾಗ ಚಂದ್ರಮ್ಮ ಸಾವಿಗೀಡಾಗಿದ್ದಾರೆ.
ಸರಿತಾ(37) ಮತ್ತು ಚಂದ್ರಮ್ಮ (55) ಸಂಬಂಧಿಕರು, ನೆರೆಹೊರೆ ಮನೆಯವರು. ಸರಿತಾ ಅವರಿಗೆ ನಿತಿನ್, ಸುನೀಲ್, ದೀಕ್ಷಿತ್ ಮೂವರು ಮಕ್ಕಳು ಇದ್ದಾರೆ. ಚಂದ್ರಮ್ಮ ಅವರಿಗೆ ಶ್ಯಾಮ್, ನಾರಾಯಣ ಮಕ್ಕಳು ಇದ್ದಾರೆ.