ಚಿಕ್ಕಮಗಳೂರು: ‘ನಮ್ಮ ನಾಯಕರೆಲ್ಲರು ಗೌರವಾನ್ವಿತರು. ಅದರಲ್ಲಿ ಯಾವುದೇ ಪಕ್ಷ, ಜಾತಿ, ಧರ್ಮ ಭೇದ ಇಲ್ಲ. ಯಾರು ಯಾರ ಬಗ್ಗೆಯೂ ಮಾತನಾಡಬಾರದು’ ಎಂದು ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಯಕರು ಅವರವರ ಕಾಲಘಟ್ಟದಲ್ಲಿ ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಉತ್ತರಿಸಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ರಂಭಾಪುರಿಶ್ರೀ ಅವರ ಆಶೀರ್ವಾದ ಪಡೆದರು.