ಕೊಲೆ ಆರೋಪ:
‘ದರ್ಶನ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ದರ್ಶನ್ ಅವರಿಗೆ ಬೆಂಗಳೂರಿನಲ್ಲಿ ಬೇರೊಬ್ಬ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಅಕ್ಕನಿಗೂ ಗೊತ್ತಾಗಿದ್ದು, ನನಗೂ ತಿಳಿಸಿದ್ದಳು. ಬುದ್ದಿ ಹೇಳಿದ್ದರೂ ವಿವಾಹ ವಿಚ್ಛೇದನ ನೀಡುವಂತೆ ಶೇತಾಗೆ ಕಿರುಕುಳ ನೀಡುತ್ತಿದ್ದರು’ ಎಂದು ಶೇತಾ ಸಹೋದರ ಸುದರ್ಶನ್ ದೂರಿನಲ್ಲಿ ತಿಳಿಸಿದ್ದಾರೆ.