<p><span style="font-size: 26px;"><strong>ಕಳಸ: </strong>`ಮನೆಯಿಂದ ಕಳಸಕ್ಕೆ ಹೋಗಿ ಬರುವುದರ ಒಳಗೆ ಮೂರ್ನಾಲ್ಕು ಸಾರಿ ಬೈಕ್ನಿಂದ ಬೀಳಬೇಕು. ಪೇಟೆಗೆ ಹೋಗಿ ಬರುವುದೆಂದರೆ ಭಾರಿ ಸಾಹಸದ ಕೆಲ್ಸ ಆಗಿದೆ...' ಚಿಕ್ಕೋಡಿಗೆ ಗ್ರಾಮದ ಯುವಕ ಸುಧೀರ್ ಈ ಮಾತುಗಳನ್ನು ಹೇಳುವುದು ಕಳಸ-ಚಿಕ್ಕೋಡಿಗೆ- ಸೂರುಮನೆ ರಸ್ತೆಯ ದುಸ್ಥಿತಿಯನ್ನು ಮನದಟ್ಟು ಮಾಡಲು. </span><br /> <br /> 100ಕ್ಕೂ ಹೆಚ್ಚು ಮನೆಗಳು ಇದ್ದು ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದ ರಸ್ತೆಯು ಮಳೆಗಾಲ ಹಿಡಿಯುವ ಮುನ್ನವೇ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಇನ್ನು ಅನಾರೋಗ್ಯದಂತಹ ಸಂದರ್ಭದಲ್ಲಿ ಮಳೆಗಾಲದಲ್ಲಿ ಪೇಟೆ ತಲುಪುವುದು ಹೇಗೋ ಎಂಬ ತಲೆನೋವು ಈಗಲೇ ಜನರನ್ನು ಬಾಧಿಸತೊಡಗಿದೆ.<br /> <br /> ಕಳೆದ ವರ್ಷ ರಸ್ತೆಗೆ ಹಾಕಿದ್ದ ಕೆಂಪು ಮಣ್ಣು ಕೆಸರಾಗಿ ಪರಿವರ್ತನೆ ಹೊಂದಿದ್ದು ರಸ್ತೆಯಲ್ಲಿ ವಾಹನಗಳಿರಲಿ, ಪಾದಚಾರಿಗಳು ಕೂಡ ನಡೆದಾಡಲು ಹೆದರುವಂತಾಗಿದೆ. ಗೇರು ತೋಟದ ಕಡಿದಾದ ರಸ್ತೆಯ ಮೂಲಕ ಹಾದು ಚಿಕ್ಕೊಡಿಗೆ, ಅಬ್ಬುಗುಡಿಗೆ, ಸೂರುಮನೆ ಸೇರುವ ಗ್ರಾಮಸ್ಥರಿಗೆ ರಸ್ತೆಯ ಈ ಸ್ಥಿತಿಯು ಚಿಂತೆ ಮೂಡಿಸಿದೆ.<br /> <br /> `ಎಷ್ಟು ವರ್ಷದಿಂದ ರಸ್ತೆಗಾಗಿ ಯಾರಿಗೆ ಮನವಿ ಕೊಟ್ರೂ ಪ್ರಯೋಜನ ಆಗಿಲ್ಲ. ಮನವಿ ಕೊಟ್ಟು ಕೊಟ್ಟು ಸಾಕಾಯ್ತು. ಫಲಿತಾಂಶ ಮಾತ್ರ ಸೊನ್ನೆ...' ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.<br /> <br /> `ಸಂಚಾರವೇ ಅಸಾಧ್ಯ ಎಂಬ ಸ್ಥಿತಿ ಬಂದಾಗ ಗ್ರಾಮಸ್ಥರೇ ಸೇರಿಕೊಂಡು ರಸ್ತೆಗೆ ಗ್ರಾವೆಲ್ ಹಾಕಿ ದುರಸ್ತಿ ಮಾಡ್ತಿದ್ದೀವಿ. ಪ್ರತಿ ವರ್ಷವೂ ಇದೇ ಗೋಳು. ಈ ವರ್ಷ ಶಾಶ್ವತ ದುರಸ್ತಿ ಮಾಡಿಕೊಡದೇ ಇದ್ರೆ ಪ್ರತಿಭಟನೆ ನಡೆಸ್ತೀವಿ' ಎಂದು ಕೋಪ ಪ್ರದರ್ಶಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಕಳಸ: </strong>`ಮನೆಯಿಂದ ಕಳಸಕ್ಕೆ ಹೋಗಿ ಬರುವುದರ ಒಳಗೆ ಮೂರ್ನಾಲ್ಕು ಸಾರಿ ಬೈಕ್ನಿಂದ ಬೀಳಬೇಕು. ಪೇಟೆಗೆ ಹೋಗಿ ಬರುವುದೆಂದರೆ ಭಾರಿ ಸಾಹಸದ ಕೆಲ್ಸ ಆಗಿದೆ...' ಚಿಕ್ಕೋಡಿಗೆ ಗ್ರಾಮದ ಯುವಕ ಸುಧೀರ್ ಈ ಮಾತುಗಳನ್ನು ಹೇಳುವುದು ಕಳಸ-ಚಿಕ್ಕೋಡಿಗೆ- ಸೂರುಮನೆ ರಸ್ತೆಯ ದುಸ್ಥಿತಿಯನ್ನು ಮನದಟ್ಟು ಮಾಡಲು. </span><br /> <br /> 100ಕ್ಕೂ ಹೆಚ್ಚು ಮನೆಗಳು ಇದ್ದು ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದ ರಸ್ತೆಯು ಮಳೆಗಾಲ ಹಿಡಿಯುವ ಮುನ್ನವೇ ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ. ಇನ್ನು ಅನಾರೋಗ್ಯದಂತಹ ಸಂದರ್ಭದಲ್ಲಿ ಮಳೆಗಾಲದಲ್ಲಿ ಪೇಟೆ ತಲುಪುವುದು ಹೇಗೋ ಎಂಬ ತಲೆನೋವು ಈಗಲೇ ಜನರನ್ನು ಬಾಧಿಸತೊಡಗಿದೆ.<br /> <br /> ಕಳೆದ ವರ್ಷ ರಸ್ತೆಗೆ ಹಾಕಿದ್ದ ಕೆಂಪು ಮಣ್ಣು ಕೆಸರಾಗಿ ಪರಿವರ್ತನೆ ಹೊಂದಿದ್ದು ರಸ್ತೆಯಲ್ಲಿ ವಾಹನಗಳಿರಲಿ, ಪಾದಚಾರಿಗಳು ಕೂಡ ನಡೆದಾಡಲು ಹೆದರುವಂತಾಗಿದೆ. ಗೇರು ತೋಟದ ಕಡಿದಾದ ರಸ್ತೆಯ ಮೂಲಕ ಹಾದು ಚಿಕ್ಕೊಡಿಗೆ, ಅಬ್ಬುಗುಡಿಗೆ, ಸೂರುಮನೆ ಸೇರುವ ಗ್ರಾಮಸ್ಥರಿಗೆ ರಸ್ತೆಯ ಈ ಸ್ಥಿತಿಯು ಚಿಂತೆ ಮೂಡಿಸಿದೆ.<br /> <br /> `ಎಷ್ಟು ವರ್ಷದಿಂದ ರಸ್ತೆಗಾಗಿ ಯಾರಿಗೆ ಮನವಿ ಕೊಟ್ರೂ ಪ್ರಯೋಜನ ಆಗಿಲ್ಲ. ಮನವಿ ಕೊಟ್ಟು ಕೊಟ್ಟು ಸಾಕಾಯ್ತು. ಫಲಿತಾಂಶ ಮಾತ್ರ ಸೊನ್ನೆ...' ಎಂದು ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.<br /> <br /> `ಸಂಚಾರವೇ ಅಸಾಧ್ಯ ಎಂಬ ಸ್ಥಿತಿ ಬಂದಾಗ ಗ್ರಾಮಸ್ಥರೇ ಸೇರಿಕೊಂಡು ರಸ್ತೆಗೆ ಗ್ರಾವೆಲ್ ಹಾಕಿ ದುರಸ್ತಿ ಮಾಡ್ತಿದ್ದೀವಿ. ಪ್ರತಿ ವರ್ಷವೂ ಇದೇ ಗೋಳು. ಈ ವರ್ಷ ಶಾಶ್ವತ ದುರಸ್ತಿ ಮಾಡಿಕೊಡದೇ ಇದ್ರೆ ಪ್ರತಿಭಟನೆ ನಡೆಸ್ತೀವಿ' ಎಂದು ಕೋಪ ಪ್ರದರ್ಶಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>