<p><strong>ಚಿಕ್ಕಮಗಳೂರು: </strong>ಮುಂದಿನ ದಿನಗಳಲ್ಲಿ ಅನೇಕ ಕುತೂಹಲಕಾರಿ ಉಪಗ್ರಹಗಳನ್ನು ಉಡಾವಣೆ ಮಾಡಿ ಜನರ ಉಪಯೋಗಕ್ಕೆ ಕಲ್ಪಿಸಲಾಗುವುದು ಎಂದು ಬೆಂಗಳೂರು ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಎಸ್.ಕೆ.ಶಿವಕುಮಾರ್ ತಿಳಿಸಿದರು.<br /> <br /> ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನಗರದ ಆದಿಚುಂಚನಗಿರಿ ತಾಂತ್ರಿಕ ಕಾಲೇಜಿನ ಸಹಯೋಗದಲ್ಲಿ ಗುರುವಾರ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಉಪಯೋಗ~ ಉಪ ನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> ಬೆಂಗಳೂರು ವಿಕ್ರಮ್ ಸಾರಾಬಾಯಿ ಪ್ರಾಧ್ಯಾಪಕ ಬಿ.ಎನ್.ಸುರೇಶ್ ಮಾತನಾಡಿ ದೇಶದ ಕೃಷಿ, ರಕ್ಷಣೆ, ಹವಾಮಾನ, ದೂರದರ್ಶನ, ಮೊಬೈಲ್, ವ್ಯಾಪಾರ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಎದುರಾಗುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಉಪಗ್ರಹ ಉಡಾವಣೆ ಅವಶ್ಯಕ ಎಂದರು.<br /> <br /> ಟಿಪ್ಪು ಸುಲ್ತಾನನ ಕಾಲದಲ್ಲಿಯೇ ಒಂದೂವರೆ ಕಿ.ಮೀ. ದೂರ ಕ್ರಮಿಸಬಲ್ಲ ಮೂರುವರೆ ಕೆ.ಜಿ.ತೂಕದ ಉಪಗ್ರಹವನ್ನು ಬಿದಿರು ಬೊಂಬಿನಲ್ಲಿ 2 ಕೆ.ಜಿ. ಗನ್ಪೌಡರ್ ತುಂಬಿ ರಾಕೆಟ್ನಂತೆ ಬಳಸಲಾಗಿತ್ತು. ಮುಂದಿನ ವರ್ಷ ಜಿಎಸ್ಎಲ್ವಿಎಂಕೆ-3 ಎಂಬ ಅತ್ಯಾಧುನಿಕ ಉಪಗ್ರಹ ಉಡಾವಣೆಗೆ ತಯಾರಿ ನಡೆಸಲಾಗಿದೆ ಎಂದು ವಿವರಿಸಿದರು.<br /> <br /> ಬೆಂಗಳೂರು ಇಸ್ರೋ ಉಪಗ್ರಹ ಕೇಂದ್ರದ ಪ್ರಾಧ್ಯಾಪಕ ಜಯರಾಮ್ ಉಪಗ್ರಹ ಉಪಯೋಗ ಗಳ ಬಗ್ಗೆ ವಿವರಿಸಿದರು.<br /> <br /> ಪ್ರಾಂಶುಪಾಲ ಸಿ.ಕೆ.ಸುಬ್ಬರಾಯ ಮಾತನಾಡಿ, ಉಪಗ್ರಹ ಕ್ಷೇತ್ರದ ಸಂಶೋಧನೆ ಮತ್ತು ಉಡಾ ವಣೆಯಲ್ಲಿ ವಿಶ್ವದಲ್ಲಿಯೇ ನಮ್ಮದು ಪ್ರತಿಷ್ಠಿತ ರಾಷ್ಟ್ರ ಎಂದರು. ಪ್ರಾಧ್ಯಾಪಕರಾದ ಎನ್.ಡಿ.ದಿನೇಶ್, ಮಲ್ಲಿಕಾರ್ಜುನ, ಸಿ.ಟಿ.ಜಯದೇವ್ ಹಾಜರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಮುಂದಿನ ದಿನಗಳಲ್ಲಿ ಅನೇಕ ಕುತೂಹಲಕಾರಿ ಉಪಗ್ರಹಗಳನ್ನು ಉಡಾವಣೆ ಮಾಡಿ ಜನರ ಉಪಯೋಗಕ್ಕೆ ಕಲ್ಪಿಸಲಾಗುವುದು ಎಂದು ಬೆಂಗಳೂರು ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಎಸ್.ಕೆ.ಶಿವಕುಮಾರ್ ತಿಳಿಸಿದರು.<br /> <br /> ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನಗರದ ಆದಿಚುಂಚನಗಿರಿ ತಾಂತ್ರಿಕ ಕಾಲೇಜಿನ ಸಹಯೋಗದಲ್ಲಿ ಗುರುವಾರ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಅಂತರಿಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಉಪಯೋಗ~ ಉಪ ನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.<br /> <br /> ಬೆಂಗಳೂರು ವಿಕ್ರಮ್ ಸಾರಾಬಾಯಿ ಪ್ರಾಧ್ಯಾಪಕ ಬಿ.ಎನ್.ಸುರೇಶ್ ಮಾತನಾಡಿ ದೇಶದ ಕೃಷಿ, ರಕ್ಷಣೆ, ಹವಾಮಾನ, ದೂರದರ್ಶನ, ಮೊಬೈಲ್, ವ್ಯಾಪಾರ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಎದುರಾಗುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಉಪಗ್ರಹ ಉಡಾವಣೆ ಅವಶ್ಯಕ ಎಂದರು.<br /> <br /> ಟಿಪ್ಪು ಸುಲ್ತಾನನ ಕಾಲದಲ್ಲಿಯೇ ಒಂದೂವರೆ ಕಿ.ಮೀ. ದೂರ ಕ್ರಮಿಸಬಲ್ಲ ಮೂರುವರೆ ಕೆ.ಜಿ.ತೂಕದ ಉಪಗ್ರಹವನ್ನು ಬಿದಿರು ಬೊಂಬಿನಲ್ಲಿ 2 ಕೆ.ಜಿ. ಗನ್ಪೌಡರ್ ತುಂಬಿ ರಾಕೆಟ್ನಂತೆ ಬಳಸಲಾಗಿತ್ತು. ಮುಂದಿನ ವರ್ಷ ಜಿಎಸ್ಎಲ್ವಿಎಂಕೆ-3 ಎಂಬ ಅತ್ಯಾಧುನಿಕ ಉಪಗ್ರಹ ಉಡಾವಣೆಗೆ ತಯಾರಿ ನಡೆಸಲಾಗಿದೆ ಎಂದು ವಿವರಿಸಿದರು.<br /> <br /> ಬೆಂಗಳೂರು ಇಸ್ರೋ ಉಪಗ್ರಹ ಕೇಂದ್ರದ ಪ್ರಾಧ್ಯಾಪಕ ಜಯರಾಮ್ ಉಪಗ್ರಹ ಉಪಯೋಗ ಗಳ ಬಗ್ಗೆ ವಿವರಿಸಿದರು.<br /> <br /> ಪ್ರಾಂಶುಪಾಲ ಸಿ.ಕೆ.ಸುಬ್ಬರಾಯ ಮಾತನಾಡಿ, ಉಪಗ್ರಹ ಕ್ಷೇತ್ರದ ಸಂಶೋಧನೆ ಮತ್ತು ಉಡಾ ವಣೆಯಲ್ಲಿ ವಿಶ್ವದಲ್ಲಿಯೇ ನಮ್ಮದು ಪ್ರತಿಷ್ಠಿತ ರಾಷ್ಟ್ರ ಎಂದರು. ಪ್ರಾಧ್ಯಾಪಕರಾದ ಎನ್.ಡಿ.ದಿನೇಶ್, ಮಲ್ಲಿಕಾರ್ಜುನ, ಸಿ.ಟಿ.ಜಯದೇವ್ ಹಾಜರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>