<div> <strong>ಅಜ್ಜಂಪುರ: </strong>ಕುಸಿರುವ ಹಂತದಲ್ಲಿ ಬಳಕೆಯಾಗದೇ, ಆಗಲೋ ಈಗಲೋ ಬೀಳಲು ಸಜ್ಜಾಗಿರುವ ಕೃಷಿ ಇಲಾಖೆ ಕಟ್ಟಡ, ಶಿಥಿಲಾವಸ್ಥೆಯಲ್ಲಿರುವ ಗ್ರಂಥಾ ಲಯ, ಸುಸ್ಥಿರ ಕಟ್ಟಡವಿದ್ದರೂ, ಬಳಕೆ ಯಾಗದ ಆರೋಗ್ಯ ಉಪಕೇಂದ್ರ, ಪಂಚಾಯಿತಿ ಕಟ್ಟಡ ಹಿಂಭಾಗವೇ ಅನು ಪಯುಕ್ತ ಗಿಡ-ಗಂಟಿಗಳು, ಕಸದ ತ್ಯಾಜ್ಯ <div> –ಇವು ಪಟ್ಟಣ ಸಮೀಪದ ಬೇಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಂಡು ಬರುವ ದೃಶ್ಯಗಳು.</div><div> </div><div> ಗಾರೆ ಕಳಚಿರುವ, ಬಿರುಕು ಬಿಟ್ಟಿರುವ ಗೋಡೆಗಳ ಹೊದ್ದಿರುವ, ಕಿಟಕಿ ಬಾಗಿಲುಗಳೇ ಇಲ್ಲದ, ಆರ್ಸಿಸಿ ಮೇಲ್ಚಾವಣೆ ಗಾರೆ ಕುಸಿದಿದ್ದು, ಕಟ್ಟಡ ಸಂಪೂರ್ಣ ಹಾಳಾಗಿದೆ. ಇದರ ಬಳಕೆಯೂ ಇಲ್ಲ. ಆದರೆ ಕಟ್ಟಡ ಮಾತ್ರ ತೆರವುಗೊಂಡಿಲ್ಲ. </div><div> </div><div> <strong>ಕಟ್ಟಡ ತೆರವಿಗೆ ಒತ್ತಾಯ: </strong>ಕಟ್ಟಡ ವನ್ನು ತೆರವುಗೊಳಿಸದಿದ್ದರೆ, ಆಟವಾ ಡುವ ಮಕ್ಕಳು ಅಥವಾ ಬರುವ ಬೀಡಾಡಿ ದನಗಳಿಗೆ ಅಪಾಯ ಉಂಟಾ ಗುವ ಸಂಭವವಿದೆ. ಕೂಡಲೇ ಸಂಬಂಧಪಟ್ಟವರು ಕಟ್ಟಡವನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.</div><div> </div><div> ಪಂಚಾಯಿತಿ ಆವರಣದಲ್ಲಿಯೇ ಇರುವ ಗ್ರಂಥಾಲಯದ ಗೋಡೆಗಳು ಹಾಳಾಗಿದ್ದು, ಹೆಂಚುಗಳು ಒಡೆದಿವೆ. ಬಾಗಿಲು ಟೊಳ್ಳಾಗಿದ್ದು, ಇಡೀ ಕಟ್ಟಡ ಅದೆಷ್ಟೋ ವರ್ಷಗಳಿಂದ ಸುಣ್ಣ-ಬಣ್ಣ ಕಂಡಿಲ್ಲ. ಅಲ್ಲದೇ ಗ್ರಂಥಾಲಯ ಕಟ್ಟಡದ ಮೆಟ್ಟಿಲು ಹಾಗೂ ಸುತ್ತಮುತ್ತ ಅನುಪ ಯುಕ್ತ ಗಿಡ-ಗಂಟಿಗಳು ಬೆಳೆದಿವೆ.</div><div> </div><div> ಗ್ರಂಥಾಲಯ ಕಟ್ಟಡಕ್ಕೆ ಬೇಕು ಕಾಯಕಲ್ಪ: ಶಿಥಿಲಾವಸ್ಥೆಯಲ್ಲಿರುವ ಗ್ರಂಥಾಲ ಯಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು. ಅಲ್ಲದೇ ಗ್ರಂಥಾಲಯ ಸುತ್ತಮುತ್ತಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಗ್ರಂಥಾಲಯ ಬಳಕೆದಾರರಿಗೆ ಅನುಕೂಲ ಮಾಡಿ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.</div><div> </div><div> ಗ್ರಾಮದ ಪಂಚಾಯಿತಿ ಆವರ ಣದಲ್ಲಿಯೇ ಇರುವ ಆರೋಗ್ಯ ಉಪ ಕೇಂದ್ರದ ಕಟ್ಟಡ ಸುಸ್ಥಿರವಾಗಿದೆ. ಆದರೆ ಹಲವು ಕಿಟಕಿಗಳ ಗಾಜು ನುಜ್ಜು ಗುಜ್ಜಾಗಿವೆ. ಒಳಗಿನ ಕುರ್ಚಿ, ಟೇಬಲ್, ಮಂಚಗಳು ಹಾಳಾಗಿವೆ. ಇನ್ನು ಕೊಠಡಿಯೊಳಗೆ ಧೂಳು ಆವರಿಸಿದ್ದು, ಜೇಡ ಸೇರಿದಂತೆ ವಿವಿಧ ಹುಳು-ಉಪ್ಪಟೆಗಳ ಆವಾಸ ತಾಣವಾಗಿ ಮಾರ್ಪ ಟ್ಟಿದೆ. ಇನ್ನು ಇದಕ್ಕೆ ಹೊಂದಿ ಕೊಂಡಿ ರುವ ಶುಶ್ರೂಕಿಯರ ವಸತಿ ನಿಲಯ ಬಳಕೆಯಾಗದೇ ಅನಾಥವಾಗಿದೆ.</div><div> </div><div> ಆರೋಗ್ಯ ಉಪ ಕೇಂದ್ರದಲ್ಲಿ ಸೇವೆ ಒದಗಿಸಲು ಮನವಿ: ಗ್ರಾಮದ ಮದ್ಯ ಭಾಗದಲ್ಲಿರುವ ಆರೋಗ್ಯ ಉಪಕೇಂದ್ರ ಇದೆ. ಇಲ್ಲಿ ಶುಶ್ರೂಕಿಯರು ಕರ್ತವ್ಯ ನಿರ್ವಹಿಸುವಂತೆ ಸಂಬಂಧಪಟ್ಟವರು ನೋಡಿ ಕೊಳ್ಳ ಬೇಕು. ಇದರಿಂದ ವಯೋವೃದ್ಧ ಹಾಗೂ ಇನ್ನಿತರ ಸಣ್ಣ-ಪುಟ್ಟ ಕಾಯಿಲೆಗಳಿಂದ ನರಳು ವವರಿಗೆ ಅನುಕೂಲ ಆಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. </div><div> </div><div> ಕುಸಿದಿರುವ ಕೃಷಿ ಇಲಾಖೆಗೆ ಸಂಬಂಧಿಸಿದ ಕಟ್ಟಡ, ಶಿಥಿಲಾವಸ್ಥೆ ತಲುಪಿದ್ದರೂ, ಪುನಃಶ್ಚೇತನವಾಗದ ಗ್ರಂಥಾಲಯ, ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾಗಿ ಸುಸ್ಥಿರವಾಗಿದ್ದರೂ, ಬಳಕೆಯಾಗದೇ ಉಳಿದಿರುವ ಆರೋಗ್ಯ ಉಪಕೇಂದ್ರಗಳು- ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸದಾ ಕರ್ತವ್ಯ ನಿರ್ವ ಹಿಸುವ ಪಂಚಾಯಿತಿಯ ಆವರಣ ದಲ್ಲಿದ್ದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈಗಲಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಶಾಸಕರು ಇತ್ತ ಗಮನ ಹರಿಸಿ, ಸಮಸ್ಯೆಗಳನ್ನು ಪರಿಹರಿಸಿ, ಅನುಕೂಲ ಮಾಡಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಅಜ್ಜಂಪುರ: </strong>ಕುಸಿರುವ ಹಂತದಲ್ಲಿ ಬಳಕೆಯಾಗದೇ, ಆಗಲೋ ಈಗಲೋ ಬೀಳಲು ಸಜ್ಜಾಗಿರುವ ಕೃಷಿ ಇಲಾಖೆ ಕಟ್ಟಡ, ಶಿಥಿಲಾವಸ್ಥೆಯಲ್ಲಿರುವ ಗ್ರಂಥಾ ಲಯ, ಸುಸ್ಥಿರ ಕಟ್ಟಡವಿದ್ದರೂ, ಬಳಕೆ ಯಾಗದ ಆರೋಗ್ಯ ಉಪಕೇಂದ್ರ, ಪಂಚಾಯಿತಿ ಕಟ್ಟಡ ಹಿಂಭಾಗವೇ ಅನು ಪಯುಕ್ತ ಗಿಡ-ಗಂಟಿಗಳು, ಕಸದ ತ್ಯಾಜ್ಯ <div> –ಇವು ಪಟ್ಟಣ ಸಮೀಪದ ಬೇಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಂಡು ಬರುವ ದೃಶ್ಯಗಳು.</div><div> </div><div> ಗಾರೆ ಕಳಚಿರುವ, ಬಿರುಕು ಬಿಟ್ಟಿರುವ ಗೋಡೆಗಳ ಹೊದ್ದಿರುವ, ಕಿಟಕಿ ಬಾಗಿಲುಗಳೇ ಇಲ್ಲದ, ಆರ್ಸಿಸಿ ಮೇಲ್ಚಾವಣೆ ಗಾರೆ ಕುಸಿದಿದ್ದು, ಕಟ್ಟಡ ಸಂಪೂರ್ಣ ಹಾಳಾಗಿದೆ. ಇದರ ಬಳಕೆಯೂ ಇಲ್ಲ. ಆದರೆ ಕಟ್ಟಡ ಮಾತ್ರ ತೆರವುಗೊಂಡಿಲ್ಲ. </div><div> </div><div> <strong>ಕಟ್ಟಡ ತೆರವಿಗೆ ಒತ್ತಾಯ: </strong>ಕಟ್ಟಡ ವನ್ನು ತೆರವುಗೊಳಿಸದಿದ್ದರೆ, ಆಟವಾ ಡುವ ಮಕ್ಕಳು ಅಥವಾ ಬರುವ ಬೀಡಾಡಿ ದನಗಳಿಗೆ ಅಪಾಯ ಉಂಟಾ ಗುವ ಸಂಭವವಿದೆ. ಕೂಡಲೇ ಸಂಬಂಧಪಟ್ಟವರು ಕಟ್ಟಡವನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.</div><div> </div><div> ಪಂಚಾಯಿತಿ ಆವರಣದಲ್ಲಿಯೇ ಇರುವ ಗ್ರಂಥಾಲಯದ ಗೋಡೆಗಳು ಹಾಳಾಗಿದ್ದು, ಹೆಂಚುಗಳು ಒಡೆದಿವೆ. ಬಾಗಿಲು ಟೊಳ್ಳಾಗಿದ್ದು, ಇಡೀ ಕಟ್ಟಡ ಅದೆಷ್ಟೋ ವರ್ಷಗಳಿಂದ ಸುಣ್ಣ-ಬಣ್ಣ ಕಂಡಿಲ್ಲ. ಅಲ್ಲದೇ ಗ್ರಂಥಾಲಯ ಕಟ್ಟಡದ ಮೆಟ್ಟಿಲು ಹಾಗೂ ಸುತ್ತಮುತ್ತ ಅನುಪ ಯುಕ್ತ ಗಿಡ-ಗಂಟಿಗಳು ಬೆಳೆದಿವೆ.</div><div> </div><div> ಗ್ರಂಥಾಲಯ ಕಟ್ಟಡಕ್ಕೆ ಬೇಕು ಕಾಯಕಲ್ಪ: ಶಿಥಿಲಾವಸ್ಥೆಯಲ್ಲಿರುವ ಗ್ರಂಥಾಲ ಯಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು. ಅಲ್ಲದೇ ಗ್ರಂಥಾಲಯ ಸುತ್ತಮುತ್ತಲಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಗ್ರಂಥಾಲಯ ಬಳಕೆದಾರರಿಗೆ ಅನುಕೂಲ ಮಾಡಿ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.</div><div> </div><div> ಗ್ರಾಮದ ಪಂಚಾಯಿತಿ ಆವರ ಣದಲ್ಲಿಯೇ ಇರುವ ಆರೋಗ್ಯ ಉಪ ಕೇಂದ್ರದ ಕಟ್ಟಡ ಸುಸ್ಥಿರವಾಗಿದೆ. ಆದರೆ ಹಲವು ಕಿಟಕಿಗಳ ಗಾಜು ನುಜ್ಜು ಗುಜ್ಜಾಗಿವೆ. ಒಳಗಿನ ಕುರ್ಚಿ, ಟೇಬಲ್, ಮಂಚಗಳು ಹಾಳಾಗಿವೆ. ಇನ್ನು ಕೊಠಡಿಯೊಳಗೆ ಧೂಳು ಆವರಿಸಿದ್ದು, ಜೇಡ ಸೇರಿದಂತೆ ವಿವಿಧ ಹುಳು-ಉಪ್ಪಟೆಗಳ ಆವಾಸ ತಾಣವಾಗಿ ಮಾರ್ಪ ಟ್ಟಿದೆ. ಇನ್ನು ಇದಕ್ಕೆ ಹೊಂದಿ ಕೊಂಡಿ ರುವ ಶುಶ್ರೂಕಿಯರ ವಸತಿ ನಿಲಯ ಬಳಕೆಯಾಗದೇ ಅನಾಥವಾಗಿದೆ.</div><div> </div><div> ಆರೋಗ್ಯ ಉಪ ಕೇಂದ್ರದಲ್ಲಿ ಸೇವೆ ಒದಗಿಸಲು ಮನವಿ: ಗ್ರಾಮದ ಮದ್ಯ ಭಾಗದಲ್ಲಿರುವ ಆರೋಗ್ಯ ಉಪಕೇಂದ್ರ ಇದೆ. ಇಲ್ಲಿ ಶುಶ್ರೂಕಿಯರು ಕರ್ತವ್ಯ ನಿರ್ವಹಿಸುವಂತೆ ಸಂಬಂಧಪಟ್ಟವರು ನೋಡಿ ಕೊಳ್ಳ ಬೇಕು. ಇದರಿಂದ ವಯೋವೃದ್ಧ ಹಾಗೂ ಇನ್ನಿತರ ಸಣ್ಣ-ಪುಟ್ಟ ಕಾಯಿಲೆಗಳಿಂದ ನರಳು ವವರಿಗೆ ಅನುಕೂಲ ಆಗುತ್ತದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. </div><div> </div><div> ಕುಸಿದಿರುವ ಕೃಷಿ ಇಲಾಖೆಗೆ ಸಂಬಂಧಿಸಿದ ಕಟ್ಟಡ, ಶಿಥಿಲಾವಸ್ಥೆ ತಲುಪಿದ್ದರೂ, ಪುನಃಶ್ಚೇತನವಾಗದ ಗ್ರಂಥಾಲಯ, ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾಗಿ ಸುಸ್ಥಿರವಾಗಿದ್ದರೂ, ಬಳಕೆಯಾಗದೇ ಉಳಿದಿರುವ ಆರೋಗ್ಯ ಉಪಕೇಂದ್ರಗಳು- ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸದಾ ಕರ್ತವ್ಯ ನಿರ್ವ ಹಿಸುವ ಪಂಚಾಯಿತಿಯ ಆವರಣ ದಲ್ಲಿದ್ದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈಗಲಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಶಾಸಕರು ಇತ್ತ ಗಮನ ಹರಿಸಿ, ಸಮಸ್ಯೆಗಳನ್ನು ಪರಿಹರಿಸಿ, ಅನುಕೂಲ ಮಾಡಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>