ಅಂಜನಾಪುರದಲ್ಲಿ ₹ 40 ಲಕ್ಷ ವೆಚ್ಚದ ಡಾಂಬರ್ ರಸ್ತೆ, ದೊಗ್ಗನಾಳ್ನಲ್ಲಿ ₹ 15 ಲಕ್ಷ, ತುಪ್ಪದ ಹಳ್ಳಿಯಲ್ಲಿ ₹ 20 ಲಕ್ಷ, ದೇವರ ಹೊಸಹಳ್ಳಿಯಲ್ಲಿ ₹ 6 ಲಕ್ಷ, ಸಿಂಗೇನಹಳ್ಳಿಯಲ್ಲಿ ₹ 20 ಲಕ್ಷ, ಬಸಾಪುರದಲ್ಲಿ ₹ 15 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಗಳು, ದೊಗ್ಗನಾಳ್, ರಾಮಗಿರಿ, ಆರ್.ನುಲೇನೂರು, ಬಸಾಪುರ, ಗುಂಡಸಮುದ್ರದಲ್ಲಿ ಶಾಲಾ ಕೊಠಡಿ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು. ಬಿದರಕೆರೆ, ಲಂಬಾಣಿ ಹಟ್ಟಿ, ರಂಗಾಪುರ, ತುಪ್ಪದಹಳ್ಳಿ, ರಾಮಗಿರಿ, ದೇವರ ಹೊಸಹಳ್ಳಿ, ಸಿಂಗೇನಹಳ್ಳಿ, ಕಣಿವೆಹಳ್ಳಿ ಸಮೀಪ ಹರಿಯುವ ಹಳ್ಳಗಳಿಗೆ ಚೆಕ್ ಡ್ಯಾಂ ನಿರ್ಮಿಸುವ ಒಟ್ಟು ₹7.85 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಂದ್ರಪ್ಪ ಚಾಲನೆ ನೀಡಿದರು.