ಈ ತೇರಿನಲ್ಲಿ ದೇಶಕ್ಕಾಗಿ ದುಡಿದಿರುವ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಕರು, ದಾಸಶ್ರೇಷ್ಠರು, ರಾಜರು, ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತರು, ಶಿವಶರಣರು, ಅವಧೂತರು, ಸಿದ್ಧರು, ಮುನಿಗಳು, ಸಾಧು–ಸಂತರು, ಕಲಾವಿದರು, ಕವಿಗಳು, ಸಾಹಿತಿಗಳು, ವಿದ್ವಾಂಸರು, ವಿಜ್ಞಾನಿ, ಎಂಜಿನಿಯರ್, ಕಲಾವಿದರು ಸೇರಿ ಸುಮಾರು 221 ಮಹನೀಯಯರ ಉಬ್ಬು ಶಿಲ್ಪಗಳನ್ನು(ವಿಗ್ರಹ) ಅಳವಡಿಸಲಾಗಿದೆ. ಇದು ಅಪ್ಪಟ ರಾಷ್ಟ್ರಪ್ರೇಮದ ತೇರು ಆಗಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ.