‘ಮೂರೂವರೆ ದಶಕಗಳ ರಾಜಕೀಯ ಪಯಣದ ಏರಿಳಿತದ ನಡುವೆ ಮತ್ತೊಂದು ತಿರುವು ಸಿಕ್ಕಿದೆ. ಸೋಲಿನ ಕಹಿ ನೆನಪುಗಳ ಸರಮಾಲೆ ಕಣ್ಣ ಮುಂದೆ ಇದ್ದರೂ ಜನಸೇವೆಯ ಉತ್ಸಾಹ ಇನ್ನೂ ಕುಂದಿಲ್ಲ. ಹಲವು ಪಕ್ಷಗಳಲ್ಲಿ, ಹೋರಾಟಗಳಲ್ಲಿ, ಸಮಾಜಮುಖಿ ಕೆಲಸಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿರುವ ಅನುಭವವೇ ನನಗೆ ಸದಾ ಸ್ಫೂರ್ತಿ' ಎಂದು ಶೇಷಣ್ಣಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.