ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, ‘ರಾಷ್ಟ್ರನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ ರೀತಿಯಲ್ಲಿ ಸಣ್ಣ ಬೇಡ ಕುಲದಲ್ಲಿ ಹುಟ್ಟಿರುವ ಶ್ರೀರಾಮುಲು ಎರಡು ಕಡೆ ಸ್ಪರ್ಧೆ ಮಾಡುತ್ತಿದ್ದಾರೆ. ಗೆದ್ದರೆ ಮುಂದೆ ನಮಗೇ ಮುಳ್ಳಾಗಬಹುದು ಎಂದು ಕೆಲ ಬಿಜೆಪಿ ಮುಖಂಡರು ನನ್ನ ವಿರುದ್ಧ ಪಿತೂರಿ ನಡೆಸಿ ಸೋಲಿಸಿದರು. ಕೇವಲ 1,400 ಮತಗಳ ಅಂತರದಲ್ಲಿ ನಾನು ಅಲ್ಲಿ ಸೋತೆ. ಮೊಳಕಾಲ್ಮುರಿನ ಜನ ನನ್ನ ಕೈ ಹಿಡಿಯದಿದ್ದರೆ 30 ವರ್ಷಗಳ ನನ್ನ ರಾಜಕೀಯ ಜೀವನ ನಾಶವಾಗುತ್ತಿತ್ತು. ಮೊಳಕಾಲ್ಮುರಿನ ಋಣವನ್ನು ಸಾಯುವ ತನಕ ಮರೆಯುವುದಿಲ್ಲ’ ಎಂದರು.