<p><strong>ಚಿತ್ರದುರ್ಗ:</strong> ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯಲು ನಡೆಯುತ್ತಿರುವ ಹೋರಾಟದ ನೇತೃತ್ವವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಹಿಸಿಕೊಳ್ಳಬೇಕು ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮನವಿ ಮಾಡಿದರು.</p>.<p>ಮುರುಘಾ ಮಠ ಪ್ರದಾನ ಮಾಡುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಚಂಪಾ ಅವರ ಕೋರಿಕೆಯನ್ನು ಕಂಡು ಮುರುಘಾ ಶರಣರು ಭಾವುಕರಾದರು.</p>.<p>‘ಲಿಂಗಾಯತ ಧರ್ಮ ಸಂವಿಧಾನಬದ್ಧ ಮಾನ್ಯತೆ ಪಡೆಯಬೇಕಿದೆ. ಚಳವಳಿಯನ್ನು ಇನ್ನಷ್ಟು ವ್ಯವಸ್ಥಿತವಾಗಿ ಕಟ್ಟುವ ಅಗತ್ಯವಿದೆ. ರಾಜಕಾರಣಿಗಳು ನಂಬಿಕೆ ಕಳೆದುಕೊಂಡಿರುವುದರಿಂದ ಮುರುಘಾ ಮಠ ಈ ಚಳವಳಿಯ ಸಾರಥ್ಯ ವಹಿಸುವ ಅಗತ್ಯವಿದೆ’ ಎಂದರು.</p>.<p>‘ಬಸವಶ್ರೀ ಪ್ರಶಸ್ತಿ ಸ್ವೀಕರಿಸಿದ್ದು ಜೀವನದ ಅತ್ಯಂತ ಸಂತಸದ ಕ್ಷಣ. ಮುರುಘಾ ಶರಣರ ರೂಪದಲ್ಲಿ ಸಾಕ್ಷಾತ್ ಬಸವಣ್ಣನವರೇ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಎಂ.ಎಂ.ಕಲಬುರ್ಗಿ ನನ್ನ ಸಹಪಾಠಿ. ಒಟ್ಟಿಗೆ ವ್ಯಾಸಂಗ ಮಾಡಿ, ಸಹೋದ್ಯೋಗಿಗಳಾಗಿ ಕೆಲಸ ಮಾಡಿದ್ದೆವು. ಬಸವಣ್ಣನ ವಿಚಾರ ನಂಬಿದ ಕಾರಣಕ್ಕೆ ಅವರ ಹತ್ಯೆ ನಡೆದಿದೆ. ನಂಬಿದ ಧ್ಯೇಯಕ್ಕಾಗಿ ಪ್ರಾಣ ತೆರಬೇಕಾಯಿತು’ ಎಂದು ಗದ್ಗದಿತರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯಲು ನಡೆಯುತ್ತಿರುವ ಹೋರಾಟದ ನೇತೃತ್ವವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಹಿಸಿಕೊಳ್ಳಬೇಕು ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮನವಿ ಮಾಡಿದರು.</p>.<p>ಮುರುಘಾ ಮಠ ಪ್ರದಾನ ಮಾಡುವ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಚಂಪಾ ಅವರ ಕೋರಿಕೆಯನ್ನು ಕಂಡು ಮುರುಘಾ ಶರಣರು ಭಾವುಕರಾದರು.</p>.<p>‘ಲಿಂಗಾಯತ ಧರ್ಮ ಸಂವಿಧಾನಬದ್ಧ ಮಾನ್ಯತೆ ಪಡೆಯಬೇಕಿದೆ. ಚಳವಳಿಯನ್ನು ಇನ್ನಷ್ಟು ವ್ಯವಸ್ಥಿತವಾಗಿ ಕಟ್ಟುವ ಅಗತ್ಯವಿದೆ. ರಾಜಕಾರಣಿಗಳು ನಂಬಿಕೆ ಕಳೆದುಕೊಂಡಿರುವುದರಿಂದ ಮುರುಘಾ ಮಠ ಈ ಚಳವಳಿಯ ಸಾರಥ್ಯ ವಹಿಸುವ ಅಗತ್ಯವಿದೆ’ ಎಂದರು.</p>.<p>‘ಬಸವಶ್ರೀ ಪ್ರಶಸ್ತಿ ಸ್ವೀಕರಿಸಿದ್ದು ಜೀವನದ ಅತ್ಯಂತ ಸಂತಸದ ಕ್ಷಣ. ಮುರುಘಾ ಶರಣರ ರೂಪದಲ್ಲಿ ಸಾಕ್ಷಾತ್ ಬಸವಣ್ಣನವರೇ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.</p>.<p>‘ಎಂ.ಎಂ.ಕಲಬುರ್ಗಿ ನನ್ನ ಸಹಪಾಠಿ. ಒಟ್ಟಿಗೆ ವ್ಯಾಸಂಗ ಮಾಡಿ, ಸಹೋದ್ಯೋಗಿಗಳಾಗಿ ಕೆಲಸ ಮಾಡಿದ್ದೆವು. ಬಸವಣ್ಣನ ವಿಚಾರ ನಂಬಿದ ಕಾರಣಕ್ಕೆ ಅವರ ಹತ್ಯೆ ನಡೆದಿದೆ. ನಂಬಿದ ಧ್ಯೇಯಕ್ಕಾಗಿ ಪ್ರಾಣ ತೆರಬೇಕಾಯಿತು’ ಎಂದು ಗದ್ಗದಿತರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>