‘ಪಕ್ಷಸಂಘಟನೆಗೆ ದುಡಿದವರನ್ನು ಕಾಂಗ್ರೆಸ್ ಎಂದೂ ಕೈಬಿಟ್ಟಿಲ್ಲ. 2018ರ ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರ ಬಿಟ್ಟು ಹೋಗದೆ, ಹಿರಿಯೂರಿನಲ್ಲಿ ಮಾಡಿದ್ದ ಮನೆಯಲ್ಲಿಯೇ ವಾಸ್ತವ್ಯ ಮುಂದುವರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕೋವಿಡ್ ಸಮಯದಲ್ಲಿ ಸಂತ್ರಸ್ತರಿಗೆ ಸಲ್ಲಿಸಿದ ಸೇವೆಯನ್ನು ಜನ ಮರೆತಿಲ್ಲ’ ಎಂದು ಹೇಳಿದರು.