3ನೇ ಘಟನೆ: ಇದೂ ಸೇರಿ ಕಳೆದ ಒಂದು ತಿಂಗಳಲ್ಲಿ ತಾಲ್ಲೂಕಿನಲ್ಲಿ ಮೂರು ಕರಡಿಗಳು ಮೃತಪಟ್ಟಿವೆ. ರೊಪ್ಪ ಬಳಿ ಒಂದು ಕರಡಿ ಶವವಾಗಿ ಪತ್ತೆಯಾಗಿತ್ತು. ಮತ್ತೊಂದು ಕರಡಿ ದೇವಸಮುದ್ರ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿತ್ತು. ಆಹಾರ, ನೀರು ಅರಸಿ ಕರಡಿಗಳು ಬರುತ್ತಿರುವ ಕಾರಣ ಘಟನೆಗಳು ನಡೆಯುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.