‘ನಾನು ಹಿಂದಿನ ಅವಧಿಯಲ್ಲಿ ಈ ಕ್ಷೇತ್ರದ ಶಾಸಕನಾಗಿದ್ದಾಗ ಮಂಜೂರು ಮಾಡಿಸಿದ್ದ ತುಂಗಭದ್ರಾ ಹಿನ್ನೀರು ಯೋಜನೆ, ಮಿನಿ ವಿಧಾನಸೌಧ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆ ತುಂಬಿಸುವುದು, ಸರ್ಕಾರಿ ವಸತಿಶಾಲೆ, ಐಟಿಐ ಕಾಲೇಜು ಕಾರ್ಯಗಳನ್ನು ಈಗಿನ ಶಾಸಕರಾದ ಬಿ.ಶ್ರೀರಾಮುಲು ತಮ್ಮ ಶ್ರಮದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಕಾರ್ಯಕರ್ತರು ಜನರಲ್ಲಿ ಮನವರಿಕೆ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಪಕ್ಷವನ್ನು ಬೇರುಮಟ್ಟದಲ್ಲಿ ಗಟ್ಟಿಗೊಳಿಸಲು ಸಹಕಾರ ನೀಡಬೇಕು’ ಎಂದರು.